ವೃದ್ಧ ತಾಯಿ ತಂದೆಯರನ್ನು ಕಡೆಗಣಿಸುವ ಕೆಟ್ಟ ಸಂಸ್ಕೃತಿ ಸಮಾಜದಲ್ಲಿ ಬೇರೂರುತ್ತಿದೆ. ವೃದ್ಧರ ಸೇವೆಯೇ ದೇವರ ಸೇವೆ ಎಂಬುದನ್ನು ಅರಿತು, ಕೊನೆಯವರೆಗೂ ಅವರನ್ನು ಕಾಪಾಡಬೇಕು. ಸಾಮಾಜಿಕ ಸಮಾನತೆ, ಏಕತೆ ಕಾಪಾಡುವ ದೊಡ್ಡ ಜವಾಬ್ದಾರಿ ಯುವಕರ ಮೇಲಿದೆ. ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸಂಘಟಿತರಾಗಿರುವ ಯುವಕರು, ರಾಯಣ್ಣನ ಆದರ್ಶಗಳನ್ನು ಪಾಲಿಸಿ, ಗುಣವಂತರಾಗಬೇಕು ಎಂದು ಹೇಳಿದರು.