ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದರು. ಈ ಕ್ಷಣಕ್ಕೆ ಸಾವಿರಾರು ಮಂದಿ ನಾಗರಿಕರು, ನಗರದ ಧರ್ಮಗುರುಗಳು, ಗಣ್ಯರು, ಅಧಿಕಾರಿಗಳು ಸಾಕ್ಷಿಯಾದರು. ಮರಾಠಾ ಲಘು ಪದಾತಿದಳದ ಬ್ಯಾಂಡ್ನವರು ದೇಶಭಕ್ತಿ ಗೀತೆ ನುಡಿಸುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.