ಅವಘಡದಿಂದಾಗಿ 5 ಗಂಟೆಯಿಂದ ಈ ಮಾರ್ಗದಲ್ಲಿ ದಾವಣಗೆರೆಗೆ ಬರಬೇಕಿದ್ದ ಹಾಗೂ ಹೋಗುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ರಾತ್ರಿ 10 ರವರೆಗೂ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಂಟರ್ಸಿಟಿ ಎಕ್ಸ್ಪ್ರೆಸ್, ಅರಸಿಕೆರೆ–ಹುಬ್ಬಳ್ಳಿ, ಚಿತ್ರದುರ್ಗ–ಹರಿಹರ, ಬೆಂಗಳೂರು–ಹುಬ್ಬಳ್ಳಿ ಸೇರಿ ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.