ರಾತ್ರಿ 7.30ರ ಸುಮಾರಿಗೆ ಬಿರುಗಾಳಿ ಸಮೇತ ಮಳೆ ಆರಂಭಗೊಂಡಿತ್ತು. ಈ ವೇಳೆಗೆ ಮರ ರೈಲು ಹಳಿಯ ಮೇಲೆ ಉರುಳಿ ಬಿತ್ತು. ಇದರಿಂದಾಗಿ ವಿದ್ಯುತ್ ಮಾರ್ಗದಲ್ಲಿನ ತಂತಿಗಳು ತುಂಡಾಗಿದ್ದವು. ಆ ಸಮಯದಲ್ಲಿ ಮೈಸೂರಿಗೆ ತೆರಳುತ್ತಿದ್ದ ಚಾಮುಂಡಿ ಎಕ್ಸ್ಪ್ರೆಸ್ ರೈಲಿನ ಗಾಲಿಗಳಿಗೆ ತುಂಡಾದ ವಿದ್ಯುತ್ ತಂತಿಗಳು ಸುತ್ತಿಕೊಂಡವು. ಹೀಗಾಗಿ ಮೈಸೂರು ಕಡೆಗೆ ತೆರಳುವ ರೈಲುಗಳ ಸಂಚಾರವನ್ನು ತಡೆಹಿಡಿಯಲಾಯಿತು.