<p><strong>ಹರಿಹರ</strong>: ‘ಸರ್ಕಾರದಿಂದ ಬಂದ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯಲ್ಲಿ ಕೋಟ್ಯಂತರ ಮೊತ್ತವನ್ನು ಗುರುಪೀಠದ ಮೂವರು ಟ್ರಸ್ಟಿಗಳು ದುರುಪಯೋಗ ಮಾಡಿಕೊಂಡ ಅನುಮಾನವಿದೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ. ರಾಜಕುಮಾರ್ ಆರೋಪಿಸಿದರು.</p>.<p>‘ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಹಣ ದುರುಪಯೋಗ ಮಾಡಿಕೊಂಡ ಅನುಮಾನವಿದೆ. ಇವರಿಗೆ ಲೆಕ್ಕಪತ್ರ ಕೇಳಿದಾಗಲೆಲ್ಲ ಗುರುಪೀಠದ ಪೀಠಾಧಿಪತಿ ವಚನಾನಂದ ಶ್ರೀಗಳು ಪೀಠತ್ಯಾಗ ಮಾಡಬೇಕೆಂದು ಒತ್ತಾಯಿಸುತ್ತಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.</p>.<p>‘ಗುರುಪೀಠದ ಆವರಣದ ಜಮೀನು ಖರೀದಿಗೆ ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಶಿವ ದೇವಸ್ಥಾನಕ್ಕೆ ದಿ.ಶಾಮನೂರು ಶಿವಶಂಕರಪ್ಪ, ಗುರುಧ್ಯಾನ ಮಂದಿರಕ್ಕೆ ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ದೇಣಿಗೆ ನೀಡಿದ್ದಾರೆ. ಮಠದ ಸಮೀಪದಲ್ಲಿ 4 ಎಕರೆ ಜಮೀನು ಖರೀದಿಗೆ ಹರಿಹರ, ರಾಣೆಬೆನ್ನೂರು, ಸಮುದಾಯದ ಜನರ ನೆರವಿದೆ. ಅಲ್ಲದೆ, ಸರ್ಕಾರದ ಅನುದಾನ, ಭಕ್ತರ ದೇಣಿಗೆಯ ಲೆಕ್ಕ ಕೊಡಬೇಕಿದೆ’ ಎಂದು ಹೇಳಿದರು.</p>.<p>‘ನಿಯಮಾನುಸಾರ ಲೆಕ್ಕ ಕೇಳಲಾಗುತ್ತಿದೆ. ಮಠದ ಹೆಸರಲ್ಲಿ 4 ಬ್ಯಾಂಕ್ ಖಾತೆಗಳ ಬದಲಿಗೆ, 14 ಖಾತೆಗಳಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬ್ಯಾಂಕ್ ಖಾತೆ ನಿರ್ವಹಣೆಗೆ ಬಿ.ಸಿ.ಉಮಾಪತಿ ಹಾಗೂ ಚಂದ್ರಶೇಖರ್ ಪೂಜಾರ್ ಅವರ ಸಹಿಯೊಂದಿಗೆ ಆಡಳಿತಾಧಿಕಾ ಸಹಿ ಸೇರಿಸಿ ಎಂದರೂ ಸೇರಿಸಿಲ್ಲ’ ಎಂದರು.</p>.<p>‘ಗುರುಪೀಠದ ಆವರಣದ ಕಟ್ಟಡದ ನಿರ್ಮಾಣಕ್ಕಾಗಿ ನಾನು ವೈಯಕ್ತಿಕವಾಗಿ ₹ 15 ಲಕ್ಷ ಮೊತ್ತದ ದೇಣಿಗೆ ಚೆಕ್ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರಿಗೆ ನೀಡಿದ್ದೇನೆ. ಈವರೆಗೂ ರಶೀದಿ ನೀಡಿಲ್ಲ. ಗುರುಪೀಠದ ಇತರ ಆಸ್ತಿಗಳ ರಕ್ಷಣೆಗೆ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ಸಮುದಾಯದ ಮುಖಂಡ ಸೋಮಣ್ಣ ಬೇವಿನಮರದ ದೂರಿದರು.</p>.<p>‘ಶ್ರೀಗಳ ಪೀಠ ತ್ಯಾಗದ ಪ್ರಕ್ರಿಯೆ ನಡೆಸಿದರೆ ಈ ಮೂವರ ವಿರುದ್ಧ ಸಮುದಾಯದ ಜನರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.</p>.<p><strong>2 ಎಕರೆ ಜಮೀನು ದುರುಪಯೋಗ</strong></p><p>ಸುದ್ದಿಗೋಷ್ಠಿ ನಡೆಯುವಾಗಲೇ ಸಮುದಾಯದ ಮುಖಂಡ ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಎಂಬವರು ಏರುಧ್ವನಿಯಲ್ಲಿ ಮಾತನಾಡಿ ಸೋಮಣ್ಣ ಬೇವಿನಮರದ ಅವರು ಶಿಗ್ಗಾವಿಯಲ್ಲಿನ ಗುರುಪೀಠಕ್ಕೆ ಸೇರಿದ 2 ಎಕರೆ ಜಮೀನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿದಾಗ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ನಂತರ ಪೊಲೀಸರು ಅವರನ್ನು ಹೊರಕ್ಕೆ ಕಳಿಸಿದರು.</p><p><strong>ಬೀದಿ ರಂಪ ಮಾಡಬೇಡಿ: ಆಗ್ರಹ</strong></p><p>ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಶಶಿಧರ ಗೌಡ ಹಾಲೇಶ ಚಂದ್ರ ಪಾಟೀಲ್ ರಾಜುಗೌಡ ಎಂಬವರು ಗುರುಪೀಠದ ಆವರಣದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಎರಡೂ ಗುಂಪುಗಳು ಸಮನ್ವಯದಿಂದ ನಾಲ್ಕು ಗೋಡೆಗಳ ಮಧ್ಯದಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಇದನ್ನು ಹಾದಿ ಬೀದಿ ರಂಪಾಟ ಮಾಡಬಾರದೆಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ‘ಸರ್ಕಾರದಿಂದ ಬಂದ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯಲ್ಲಿ ಕೋಟ್ಯಂತರ ಮೊತ್ತವನ್ನು ಗುರುಪೀಠದ ಮೂವರು ಟ್ರಸ್ಟಿಗಳು ದುರುಪಯೋಗ ಮಾಡಿಕೊಂಡ ಅನುಮಾನವಿದೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ. ರಾಜಕುಮಾರ್ ಆರೋಪಿಸಿದರು.</p>.<p>‘ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಹಣ ದುರುಪಯೋಗ ಮಾಡಿಕೊಂಡ ಅನುಮಾನವಿದೆ. ಇವರಿಗೆ ಲೆಕ್ಕಪತ್ರ ಕೇಳಿದಾಗಲೆಲ್ಲ ಗುರುಪೀಠದ ಪೀಠಾಧಿಪತಿ ವಚನಾನಂದ ಶ್ರೀಗಳು ಪೀಠತ್ಯಾಗ ಮಾಡಬೇಕೆಂದು ಒತ್ತಾಯಿಸುತ್ತಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.</p>.<p>‘ಗುರುಪೀಠದ ಆವರಣದ ಜಮೀನು ಖರೀದಿಗೆ ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಶಿವ ದೇವಸ್ಥಾನಕ್ಕೆ ದಿ.ಶಾಮನೂರು ಶಿವಶಂಕರಪ್ಪ, ಗುರುಧ್ಯಾನ ಮಂದಿರಕ್ಕೆ ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ದೇಣಿಗೆ ನೀಡಿದ್ದಾರೆ. ಮಠದ ಸಮೀಪದಲ್ಲಿ 4 ಎಕರೆ ಜಮೀನು ಖರೀದಿಗೆ ಹರಿಹರ, ರಾಣೆಬೆನ್ನೂರು, ಸಮುದಾಯದ ಜನರ ನೆರವಿದೆ. ಅಲ್ಲದೆ, ಸರ್ಕಾರದ ಅನುದಾನ, ಭಕ್ತರ ದೇಣಿಗೆಯ ಲೆಕ್ಕ ಕೊಡಬೇಕಿದೆ’ ಎಂದು ಹೇಳಿದರು.</p>.<p>‘ನಿಯಮಾನುಸಾರ ಲೆಕ್ಕ ಕೇಳಲಾಗುತ್ತಿದೆ. ಮಠದ ಹೆಸರಲ್ಲಿ 4 ಬ್ಯಾಂಕ್ ಖಾತೆಗಳ ಬದಲಿಗೆ, 14 ಖಾತೆಗಳಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬ್ಯಾಂಕ್ ಖಾತೆ ನಿರ್ವಹಣೆಗೆ ಬಿ.ಸಿ.ಉಮಾಪತಿ ಹಾಗೂ ಚಂದ್ರಶೇಖರ್ ಪೂಜಾರ್ ಅವರ ಸಹಿಯೊಂದಿಗೆ ಆಡಳಿತಾಧಿಕಾ ಸಹಿ ಸೇರಿಸಿ ಎಂದರೂ ಸೇರಿಸಿಲ್ಲ’ ಎಂದರು.</p>.<p>‘ಗುರುಪೀಠದ ಆವರಣದ ಕಟ್ಟಡದ ನಿರ್ಮಾಣಕ್ಕಾಗಿ ನಾನು ವೈಯಕ್ತಿಕವಾಗಿ ₹ 15 ಲಕ್ಷ ಮೊತ್ತದ ದೇಣಿಗೆ ಚೆಕ್ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರಿಗೆ ನೀಡಿದ್ದೇನೆ. ಈವರೆಗೂ ರಶೀದಿ ನೀಡಿಲ್ಲ. ಗುರುಪೀಠದ ಇತರ ಆಸ್ತಿಗಳ ರಕ್ಷಣೆಗೆ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ಸಮುದಾಯದ ಮುಖಂಡ ಸೋಮಣ್ಣ ಬೇವಿನಮರದ ದೂರಿದರು.</p>.<p>‘ಶ್ರೀಗಳ ಪೀಠ ತ್ಯಾಗದ ಪ್ರಕ್ರಿಯೆ ನಡೆಸಿದರೆ ಈ ಮೂವರ ವಿರುದ್ಧ ಸಮುದಾಯದ ಜನರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.</p>.<p><strong>2 ಎಕರೆ ಜಮೀನು ದುರುಪಯೋಗ</strong></p><p>ಸುದ್ದಿಗೋಷ್ಠಿ ನಡೆಯುವಾಗಲೇ ಸಮುದಾಯದ ಮುಖಂಡ ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಎಂಬವರು ಏರುಧ್ವನಿಯಲ್ಲಿ ಮಾತನಾಡಿ ಸೋಮಣ್ಣ ಬೇವಿನಮರದ ಅವರು ಶಿಗ್ಗಾವಿಯಲ್ಲಿನ ಗುರುಪೀಠಕ್ಕೆ ಸೇರಿದ 2 ಎಕರೆ ಜಮೀನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿದಾಗ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ನಂತರ ಪೊಲೀಸರು ಅವರನ್ನು ಹೊರಕ್ಕೆ ಕಳಿಸಿದರು.</p><p><strong>ಬೀದಿ ರಂಪ ಮಾಡಬೇಡಿ: ಆಗ್ರಹ</strong></p><p>ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಶಶಿಧರ ಗೌಡ ಹಾಲೇಶ ಚಂದ್ರ ಪಾಟೀಲ್ ರಾಜುಗೌಡ ಎಂಬವರು ಗುರುಪೀಠದ ಆವರಣದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಎರಡೂ ಗುಂಪುಗಳು ಸಮನ್ವಯದಿಂದ ನಾಲ್ಕು ಗೋಡೆಗಳ ಮಧ್ಯದಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಇದನ್ನು ಹಾದಿ ಬೀದಿ ರಂಪಾಟ ಮಾಡಬಾರದೆಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>