ಸಹಾಯಕ ಕೃಷಿ ನಿರ್ದೇಶಕ ಗೋಂದಿ ಮಂಜುನಾಥ ಮಾತನಾಡಿ, ‘ಸತತ ಮಳೆಯಾಗುತ್ತಿರುವುದರಿಂದ ರೈತರು ರಸಗೊಬ್ಬರವನ್ನು ಹೆಚ್ಚಾಗಿ ಬಳಸದೆ ನೈಂಟಿನಾಲ್, ನ್ಯಾನೊ ಯೂರಿಯಾ ದ್ರವರೂಪದ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಗೊಬ್ಬರದ ಬೇಡಿಕೆ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪ್ರತಿಕ್ರಿಯಿಸಿದರು.