ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲ್ಲೂಕು ಇಂದು (ಜ.9)ರಾತ್ರಿ 12ರಿಂದ ಅಧಿಕೃತವಾಗಿ ಮಾತೃ ಜಿಲ್ಲೆ ಬಳ್ಳಾರಿ ಮಡಿಲು ಸೇರಲಿದೆ.
ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡುವುದಕ್ಕೆ ದಾವಣಗೆರೆ ಜಿಲ್ಲಾ ಪಂಚಾಯಿತಿಯು ಅಂತಿಮ ಅಧಿಸೂಚನೆ ಮತ್ತು ಗೆಜೆಟ್ ಅನುಮೋದನೆಯನ್ನು ಬುಧವಾರ ಹೊರಡಿಸಿತು.
‘ಹರಪನಹಳ್ಳಿ ತಾಲ್ಲೂಕು ಜ. 10ರಿಂದಲೇ ಅಧಿಕೃತವಾಗಿ ಬಳ್ಳಾರಿ ಜಿಲ್ಲೆಯ ತಾಲ್ಲೂಕಾಗಲಿದೆ. ಈ ತಾಲ್ಲೂಕಿಗೆ ಸಂಬಂಧಿಸಿದ ಎಲ್ಲಾ ರೀತಿಯ ಕೆಲಸಗಳು ಇನ್ನು ಮುಂದೆ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಒಳಪಡಲಿವೆ’ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.