<p>ಹರಿಹರ: ನಗರದ ಹೊರವಲಯದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸಾಲು ಮರಗಳಲ್ಲಿ 10 ಮರಗಳು ಸುಟ್ಟು ಭಸ್ಮವಾಗಿವೆ.</p>.<p>ನಗರದಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಮೇಲ್ಸೇತುವೆ ಬಳಿಯ ಜೋಡಿ ರಸ್ತೆ (ಹಳೆ ಪಿ.ಬಿ.ರಸ್ತೆ) ಬಲಭಾಗದ ಸಾಲು ಮರಗಳು ಬೆಂಕಿಗೆ ಆಹುತಿಯಾಗಿದೆ. ಏ. 20ರಂದು ಈ ಘಟನೆ ನಡೆದಿದೆ.</p>.<p>10 ವರ್ಷಗಳ ಹಿಂದೆ 2 ಕಿ.ಮೀ. ಉದ್ದದ ಈ ಜೋಡಿ ರಸ್ತೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ 1000ಕ್ಕೂ ಹೆಚ್ಚು ಬೇವು, ಹೊಂಗೆ ಸೇರಿದಂತೆ ಹಲವು ಜಾತಿಯ ಸಸಿಗಳನ್ನು ನೆಟ್ಟು ಪೋಷಿಸಲಾಗಿತ್ತು. ಆ ಸಸಿಗಳು ಈಗ ನೆರಳು, ಗಾಳಿ ನೀಡುವ ಮರಗಳಾಗಿ ಬೆಳೆದು ನಿಂತಿವೆ. ಅವುಗಳ ಪೈಕಿ 10 ಮರಗಳು ಬೆಂಕಿಗೆ ಆಹುತಿಯಾಗಿವೆ.</p>.<p>ಹರಿಹರ– ದಾವಣಗೆರೆ ಮಧ್ಯೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತಂಪಾದ ನೆರಳು, ಗಾಳಿಯನ್ನು ನೀಡುತ್ತಿದ್ದ ಮರಗಳು ಸುಟ್ಟುಹೋಗಿವೆ. ಸಮೀಪವೇ ಕೆಲವು ಲೇಔಟ್ಗಳನ್ನು ಮಾಡಲಾಗುತ್ತಿದ್ದು, ಕೃಷಿ ಜಮೀನುಗಳೂ ಇವೆ. ಈ ಮರಗಳಿದ್ದ ಜಾಗದಲ್ಲೇ ಜಾಲಿಗಿಡಗಳ ದಟ್ಟವಾದ ಪೊದೆ ಇತ್ತು. ಆ ಜಾಲಿ ಪೊದೆಯನ್ನು ನಿವಾರಿಸಲು ಹಚ್ಚಿದ ಬೆಂಕಿ 10 ಮರಗಳಿಗೆ ಮಾರಕವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.</p>.<p>ನಿತ್ಯ ಅಂದಾಜು 1000 ಸಾರಿಗೆ ಸಂಸ್ಥೆಯ ಬಸ್ಸುಗಳು, 2000 ಕಾರು, 250 ಲಾರಿ, 3000 ಲಘು ವಾಹನಗಳು ಸೇರಿ 15,000ಕ್ಕೂ ಹೆಚ್ಚು ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುತ್ತವೆ.</p>.<p>‘ಇಲ್ಲಿನ ಸಾಲು ಮರಗಳನ್ನು ರಕ್ಷಿಸಲು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮರಗಳ ಸುತ್ತಲೂ ಬೆಳೆದಿರುವ ಜಾಲಿಗಿಡ ಹಾಗೂ ಇತರೆ ನಿರುಪಯುಕ್ತ ಜಂಗಲ್ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕು’ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.</p>.<p>ಅವಧಿ ಮುಗಿದ ಔಷಧಿ, ಗ್ಯಾರೇಜ್, ಗುಜರಿ, ಎಳನೀರು ತ್ಯಾಜ್ಯ, ಸತ್ತ ಪ್ರಾಣಿಗಳು ಸೇರಿದಂತೆ ಬೇಡವಾದದ್ದನ್ನು ತಂದು ಸುರಿಯುವ ಡಂಪ್ ಯಾರ್ಡ್ ಆಗಿದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ರಸ್ತೆ ಬದಿ ಬೆಳೆದಿರುವ ಜಂಗಲ್ ತೆರವುಗೊಳಿಸುತ್ತಿಲ್ಲ. ನಗರದ ಹೆಮ್ಮೆಯಾಗಿರುವ ಈ ರಸ್ತೆಯ ಸೌಂದರ್ಯ ರಕ್ಷಿಸಲು ತಾಲ್ಲೂಕು ಆಡಳಿತ ಗಮನ ಹರಿಸಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಸಂಚಾಲಕ ಬಿ. ಮಗ್ದುಮ್ ಒತ್ತಾಯಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-43-404594884</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ನಗರದ ಹೊರವಲಯದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸಾಲು ಮರಗಳಲ್ಲಿ 10 ಮರಗಳು ಸುಟ್ಟು ಭಸ್ಮವಾಗಿವೆ.</p>.<p>ನಗರದಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಮೇಲ್ಸೇತುವೆ ಬಳಿಯ ಜೋಡಿ ರಸ್ತೆ (ಹಳೆ ಪಿ.ಬಿ.ರಸ್ತೆ) ಬಲಭಾಗದ ಸಾಲು ಮರಗಳು ಬೆಂಕಿಗೆ ಆಹುತಿಯಾಗಿದೆ. ಏ. 20ರಂದು ಈ ಘಟನೆ ನಡೆದಿದೆ.</p>.<p>10 ವರ್ಷಗಳ ಹಿಂದೆ 2 ಕಿ.ಮೀ. ಉದ್ದದ ಈ ಜೋಡಿ ರಸ್ತೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ 1000ಕ್ಕೂ ಹೆಚ್ಚು ಬೇವು, ಹೊಂಗೆ ಸೇರಿದಂತೆ ಹಲವು ಜಾತಿಯ ಸಸಿಗಳನ್ನು ನೆಟ್ಟು ಪೋಷಿಸಲಾಗಿತ್ತು. ಆ ಸಸಿಗಳು ಈಗ ನೆರಳು, ಗಾಳಿ ನೀಡುವ ಮರಗಳಾಗಿ ಬೆಳೆದು ನಿಂತಿವೆ. ಅವುಗಳ ಪೈಕಿ 10 ಮರಗಳು ಬೆಂಕಿಗೆ ಆಹುತಿಯಾಗಿವೆ.</p>.<p>ಹರಿಹರ– ದಾವಣಗೆರೆ ಮಧ್ಯೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತಂಪಾದ ನೆರಳು, ಗಾಳಿಯನ್ನು ನೀಡುತ್ತಿದ್ದ ಮರಗಳು ಸುಟ್ಟುಹೋಗಿವೆ. ಸಮೀಪವೇ ಕೆಲವು ಲೇಔಟ್ಗಳನ್ನು ಮಾಡಲಾಗುತ್ತಿದ್ದು, ಕೃಷಿ ಜಮೀನುಗಳೂ ಇವೆ. ಈ ಮರಗಳಿದ್ದ ಜಾಗದಲ್ಲೇ ಜಾಲಿಗಿಡಗಳ ದಟ್ಟವಾದ ಪೊದೆ ಇತ್ತು. ಆ ಜಾಲಿ ಪೊದೆಯನ್ನು ನಿವಾರಿಸಲು ಹಚ್ಚಿದ ಬೆಂಕಿ 10 ಮರಗಳಿಗೆ ಮಾರಕವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.</p>.<p>ನಿತ್ಯ ಅಂದಾಜು 1000 ಸಾರಿಗೆ ಸಂಸ್ಥೆಯ ಬಸ್ಸುಗಳು, 2000 ಕಾರು, 250 ಲಾರಿ, 3000 ಲಘು ವಾಹನಗಳು ಸೇರಿ 15,000ಕ್ಕೂ ಹೆಚ್ಚು ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುತ್ತವೆ.</p>.<p>‘ಇಲ್ಲಿನ ಸಾಲು ಮರಗಳನ್ನು ರಕ್ಷಿಸಲು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮರಗಳ ಸುತ್ತಲೂ ಬೆಳೆದಿರುವ ಜಾಲಿಗಿಡ ಹಾಗೂ ಇತರೆ ನಿರುಪಯುಕ್ತ ಜಂಗಲ್ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕು’ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.</p>.<p>ಅವಧಿ ಮುಗಿದ ಔಷಧಿ, ಗ್ಯಾರೇಜ್, ಗುಜರಿ, ಎಳನೀರು ತ್ಯಾಜ್ಯ, ಸತ್ತ ಪ್ರಾಣಿಗಳು ಸೇರಿದಂತೆ ಬೇಡವಾದದ್ದನ್ನು ತಂದು ಸುರಿಯುವ ಡಂಪ್ ಯಾರ್ಡ್ ಆಗಿದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ರಸ್ತೆ ಬದಿ ಬೆಳೆದಿರುವ ಜಂಗಲ್ ತೆರವುಗೊಳಿಸುತ್ತಿಲ್ಲ. ನಗರದ ಹೆಮ್ಮೆಯಾಗಿರುವ ಈ ರಸ್ತೆಯ ಸೌಂದರ್ಯ ರಕ್ಷಿಸಲು ತಾಲ್ಲೂಕು ಆಡಳಿತ ಗಮನ ಹರಿಸಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಸಂಚಾಲಕ ಬಿ. ಮಗ್ದುಮ್ ಒತ್ತಾಯಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-43-404594884</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>