<p>ಹರಿಹರ: ನಗರದ ಆಶ್ರಯ ಕಾಲೊನಿಯ ಪರಿಶಿಷ್ಟ ಸಮುದಾಯದವರು ವಾಸಿಸುತ್ತಿರುವ ಬಡಾವಣೆಯ ತ್ಯಾಜ್ಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಹನುಮಂತಪ್ಪ ನಗರಸಭೆ ಪೌರಾಯುಕ್ತೆ ಈರಮ್ಮ ವಿ. ಅವರಿಗೆ ಆಗ್ರಹಿಸಿದರು.</p>.<p>‘ನಗರದ ಆಶ್ರಯ ಕಾಲೊನಿಯ ನಾಲ್ಕು ಸಾಲಿನ 160 ಮನೆಗಳಲ್ಲಿ ಪರಿಶಿಷ್ಟ ಸಮುದಾಯದ ಜನ ವಾಸಿಸುತ್ತಿದ್ದಾರೆ. 25 ವರ್ಷಗಳಿಂದಲೂ ಈ ಮನೆಗಳ ತ್ಯಾಜ್ಯ ನೀರು ಹರಿಯುತ್ತಿದ್ದ ಚರಂಡಿಯ ಮಾರ್ಗವನ್ನು ಪಕ್ಕದ ಜಮೀನಿನಲ್ಲಿ ಲೇ ಔಟ್ ನಿರ್ಮಿಸುತ್ತಿರುವವರು ತಡೆದಿದ್ದಾರೆ’ ಎಂದು ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪೌರಾಯುಕ್ತರಿಗೆ ಮನವರಿಕೆ ಮಾಡಿದರು.</p>.<p>ಹಲವು ದಿನಗಳಿಂದ ಚರಂಡಿ ಮಾರ್ಗ ಬಂದ್ ಮಾಡಿರುವುದರಿಂದ ನಾಲ್ಕು ಸಾಲುಗಳ ಮನೆಗಳ ನೀರು ಮುಂದೆ ಸಾಗದೆ ನಿಂತಿದೆ. ಇದರಿಂದ ಈ ಭಾಗದಲ್ಲಿ ದುರ್ವಾಸನೆ ಮನೆ ಮಾಡಿದ್ದು ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.</p>.<p>ಚರಂಡಿ ತುಂಬಿರುವುದರಿಂದ ತ್ಯಾಜ್ಯ ನೀರು ಸಂಗ್ರಹವಾಗಿದೆ. ಮಕ್ಕಳು ಆಟವಾಡುತ್ತಾ ಹೋಗಿ ಬಿದ್ದರೆ ಜೀವ ಹಾನಿಯಾಗುವ ಅಪಾಯವಿದೆ. ಚರಂಡಿ ನೀರು ಮುಂಚಿನಂತೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.</p>.<p>‘ಧೂಡಾ’ ಅಧಿಕಾರಿಗಳು ಹಾಗೂ ಲೇಔಟ್ ನಿರ್ವಾಹಕರ ಜೊತೆಗೆ ಮಾತನಾಡಿ ಶೀಘ್ರ ಸಮಸ್ಯೆ ನಿವಾರಿಸಲಾಗುವುದು ಎಂದು ಪೌರಾಯುಕ್ತೆ ಭರವಸೆ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-43-1660068711</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ನಗರದ ಆಶ್ರಯ ಕಾಲೊನಿಯ ಪರಿಶಿಷ್ಟ ಸಮುದಾಯದವರು ವಾಸಿಸುತ್ತಿರುವ ಬಡಾವಣೆಯ ತ್ಯಾಜ್ಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಹನುಮಂತಪ್ಪ ನಗರಸಭೆ ಪೌರಾಯುಕ್ತೆ ಈರಮ್ಮ ವಿ. ಅವರಿಗೆ ಆಗ್ರಹಿಸಿದರು.</p>.<p>‘ನಗರದ ಆಶ್ರಯ ಕಾಲೊನಿಯ ನಾಲ್ಕು ಸಾಲಿನ 160 ಮನೆಗಳಲ್ಲಿ ಪರಿಶಿಷ್ಟ ಸಮುದಾಯದ ಜನ ವಾಸಿಸುತ್ತಿದ್ದಾರೆ. 25 ವರ್ಷಗಳಿಂದಲೂ ಈ ಮನೆಗಳ ತ್ಯಾಜ್ಯ ನೀರು ಹರಿಯುತ್ತಿದ್ದ ಚರಂಡಿಯ ಮಾರ್ಗವನ್ನು ಪಕ್ಕದ ಜಮೀನಿನಲ್ಲಿ ಲೇ ಔಟ್ ನಿರ್ಮಿಸುತ್ತಿರುವವರು ತಡೆದಿದ್ದಾರೆ’ ಎಂದು ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪೌರಾಯುಕ್ತರಿಗೆ ಮನವರಿಕೆ ಮಾಡಿದರು.</p>.<p>ಹಲವು ದಿನಗಳಿಂದ ಚರಂಡಿ ಮಾರ್ಗ ಬಂದ್ ಮಾಡಿರುವುದರಿಂದ ನಾಲ್ಕು ಸಾಲುಗಳ ಮನೆಗಳ ನೀರು ಮುಂದೆ ಸಾಗದೆ ನಿಂತಿದೆ. ಇದರಿಂದ ಈ ಭಾಗದಲ್ಲಿ ದುರ್ವಾಸನೆ ಮನೆ ಮಾಡಿದ್ದು ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.</p>.<p>ಚರಂಡಿ ತುಂಬಿರುವುದರಿಂದ ತ್ಯಾಜ್ಯ ನೀರು ಸಂಗ್ರಹವಾಗಿದೆ. ಮಕ್ಕಳು ಆಟವಾಡುತ್ತಾ ಹೋಗಿ ಬಿದ್ದರೆ ಜೀವ ಹಾನಿಯಾಗುವ ಅಪಾಯವಿದೆ. ಚರಂಡಿ ನೀರು ಮುಂಚಿನಂತೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.</p>.<p>‘ಧೂಡಾ’ ಅಧಿಕಾರಿಗಳು ಹಾಗೂ ಲೇಔಟ್ ನಿರ್ವಾಹಕರ ಜೊತೆಗೆ ಮಾತನಾಡಿ ಶೀಘ್ರ ಸಮಸ್ಯೆ ನಿವಾರಿಸಲಾಗುವುದು ಎಂದು ಪೌರಾಯುಕ್ತೆ ಭರವಸೆ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-43-1660068711</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>