<p><strong>ಹರಿಹರ:</strong> ನಗರದ ಅಮರಾವತಿ ಕಾಲೊನಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬರೋಬ್ಬರಿ 483 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.</p>.<p>ಗೋಕರ್ಣದಲ್ಲಿನ ಸಂಬಂಧಿಕರ ಮನೆಯ ಮದುವೆ ಸಮಾರಂಭಕ್ಕಾಗಿ ಅಮರಾವತಿ ಕಾಲೊನಿಯ ‘ಡಿ’ ಬ್ಲಾಕ್ ನಿವಾಸಿ, ವ್ಯಾಪಾರಿ ಪರೀಕ್ಷಿತ್ ಸಿ. ನಾಯ್ಡು ಅವರು ಸೋಮವಾರ ಮಧ್ಯಾಹ್ನ ಕುಟುಂಬದವರೊಂದಿಗೆ ತೆರಳಿದ್ದಾರೆ. ಅದೇ ದಿನ ರಾತ್ರಿ ಕಳ್ಳತನ ನಡೆದಿದೆ.</p>.<p>ಮೇ 19ರಂದು (ಮಂಗಳವಾರ) ಬೆಳಿಗ್ಗೆ ಮನೆ ಕೆಲಸದಾಕೆ ಬಂದಾಗ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ಹಾಗೂ ಚಿಲಕ ಒಡೆದಿರುವುದು ಕಂಡಿದೆ. ವಿಷಯ ತಿಳಿದು ಪ್ರವಾಸ ಮೊಟಕುಗೊಳಿಸಿ ವಾಪಸ್ಸಾದ ಕುಟುಂಬಸ್ಥರು ರಾತ್ರಿ 11.30ಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ದೊಡ್ಡ ಆಭರಣಗಳೇ ಗುರಿ: ಮನೆಗೆ ನುಗ್ಗಿದ ಕಳ್ಳರು, ಬೆಡ್ರೂಂನಲ್ಲಿದ್ದ ಬೀರುವಿನ ಕೀಯನ್ನು ಹುಡುಕಿ ತೆರೆದು ಅದರಲ್ಲಿದ್ದ ವಂಕಿ ರಿಂಗ್, ಲಾಂಗ್ ಚೈನ್, ಬ್ರೇಸ್ಲೆಟ್, ಡಿಸ್ಕೋ ಚೈನ್, ಬಳೆಗಳು ಸೇರಿದಂತೆ ಒಟ್ಟು 483 ಗ್ರಾಂ ಬಂಗಾರದ ಆಭರಣಗಳು ಹಾಗೂ ₹ 10,000 ನಗದು ದೋಚಿದ್ದಾರೆ.</p>.<p>ಕಳವಾದ ಚಿನ್ನಾಭರಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹ 67,62,000 ಎಂದು ಅಂದಾಜಿಸಲಾಗಿದೆ. ಅಚ್ಚರಿಯೆಂದರೆ ಕಳ್ಳರು ಕೇವಲ ದೊಡ್ಡ- ದೊಡ್ಡ ಆಭರಣಗಳನ್ನು ಮಾತ್ರ ಕದ್ದೊಯ್ದು, ಸಣ್ಣ–ಪುಟ್ಟ ಒಡವೆಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.</p>.<p>ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕುಟುಂಬ ಸಮೇತ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವಾಗ ಸಾರ್ವಜನಿಕರು ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇದೇ ವೇಳೆ ಪೊಲೀಸರು ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-43-891531645</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ನಗರದ ಅಮರಾವತಿ ಕಾಲೊನಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬರೋಬ್ಬರಿ 483 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.</p>.<p>ಗೋಕರ್ಣದಲ್ಲಿನ ಸಂಬಂಧಿಕರ ಮನೆಯ ಮದುವೆ ಸಮಾರಂಭಕ್ಕಾಗಿ ಅಮರಾವತಿ ಕಾಲೊನಿಯ ‘ಡಿ’ ಬ್ಲಾಕ್ ನಿವಾಸಿ, ವ್ಯಾಪಾರಿ ಪರೀಕ್ಷಿತ್ ಸಿ. ನಾಯ್ಡು ಅವರು ಸೋಮವಾರ ಮಧ್ಯಾಹ್ನ ಕುಟುಂಬದವರೊಂದಿಗೆ ತೆರಳಿದ್ದಾರೆ. ಅದೇ ದಿನ ರಾತ್ರಿ ಕಳ್ಳತನ ನಡೆದಿದೆ.</p>.<p>ಮೇ 19ರಂದು (ಮಂಗಳವಾರ) ಬೆಳಿಗ್ಗೆ ಮನೆ ಕೆಲಸದಾಕೆ ಬಂದಾಗ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ಹಾಗೂ ಚಿಲಕ ಒಡೆದಿರುವುದು ಕಂಡಿದೆ. ವಿಷಯ ತಿಳಿದು ಪ್ರವಾಸ ಮೊಟಕುಗೊಳಿಸಿ ವಾಪಸ್ಸಾದ ಕುಟುಂಬಸ್ಥರು ರಾತ್ರಿ 11.30ಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ದೊಡ್ಡ ಆಭರಣಗಳೇ ಗುರಿ: ಮನೆಗೆ ನುಗ್ಗಿದ ಕಳ್ಳರು, ಬೆಡ್ರೂಂನಲ್ಲಿದ್ದ ಬೀರುವಿನ ಕೀಯನ್ನು ಹುಡುಕಿ ತೆರೆದು ಅದರಲ್ಲಿದ್ದ ವಂಕಿ ರಿಂಗ್, ಲಾಂಗ್ ಚೈನ್, ಬ್ರೇಸ್ಲೆಟ್, ಡಿಸ್ಕೋ ಚೈನ್, ಬಳೆಗಳು ಸೇರಿದಂತೆ ಒಟ್ಟು 483 ಗ್ರಾಂ ಬಂಗಾರದ ಆಭರಣಗಳು ಹಾಗೂ ₹ 10,000 ನಗದು ದೋಚಿದ್ದಾರೆ.</p>.<p>ಕಳವಾದ ಚಿನ್ನಾಭರಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹ 67,62,000 ಎಂದು ಅಂದಾಜಿಸಲಾಗಿದೆ. ಅಚ್ಚರಿಯೆಂದರೆ ಕಳ್ಳರು ಕೇವಲ ದೊಡ್ಡ- ದೊಡ್ಡ ಆಭರಣಗಳನ್ನು ಮಾತ್ರ ಕದ್ದೊಯ್ದು, ಸಣ್ಣ–ಪುಟ್ಟ ಒಡವೆಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.</p>.<p>ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕುಟುಂಬ ಸಮೇತ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವಾಗ ಸಾರ್ವಜನಿಕರು ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇದೇ ವೇಳೆ ಪೊಲೀಸರು ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-43-891531645</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>