<p>ಹರಿಹರ: ನಗರದ ನಾಗರಿಕರಿಂದ ಹಲವು ಸಂದರ್ಭಗಳಲ್ಲಿ ಟೀಕೆಗೆ ಒಳಗಾಗುವ ನಗರಸಭೆಯವರು, ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಬದಿ ಸಂಗ್ರಹವಾಗಿದ್ದ ಮಣ್ಣು ತೆರವುಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ನಗರದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ಹಾಗೂ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಗಳ ಡಿವೈಡರ್ಗಳ ಪಕ್ಕದಲ್ಲಿ ವರ್ಷದಿಂದ ಶೇಖರವಾಗಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ವಾರದಿಂದ ನಡೆಯುತ್ತಿದೆ.</p>.<p>ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯ ಎಲ್ಐಸಿ ಕಚೇರಿಯಿಂದ ಎಂಕೆಇಟಿ ಶಾಲೆವರೆಗಿನ ಡಿವೈಡರ್ ಹಾಗೂ ಬೀರೂರು-ಸಮ್ಮಸಗಿ ಹೆದ್ದಾರಿಯ ರೈಲ್ವೆ ಫ್ಲೈಓವರ್ನಿಂದ ಬೆಸ್ಕಾಂ ಕಚೇರಿವರೆಗಿನ ಡಿವೈಡರ್ನ ಎರಡೂ ಬದಿಯ ಮಣ್ಣನ್ನು ಬಹುತೇಕ ತೆರವುಗೊಳಿಸಲಾಗಿದೆ.</p>.<p>ವಾಹನಗಳು ಸಂಚರಿಸುವಾಗ ದೂಳು ಏಳುವುದು ಹಾಗೂ ಮಳೆ ಬಂದಾಗ ರಸ್ತೆ ತುಂಬಾ ಮಣ್ಣು ಹರಡಿ ವಾಹನ ಸಂಚಾರಕ್ಕೆ ಕಂಕಟ ಎದುರಾಗುತ್ತಿತ್ತು. ಈ ಮಣ್ಣನ್ನು ಸಾಗಣೆ ಮಾಡಿರುವುದರಿಂದ ಈ ಸಮಸ್ಯೆ ಬಹುತೇಕ ನಿವಾರಣೆಯಾದಂತಾಗಿದೆ.</p>.<p>ದೂಳು ನಿಯಂತ್ರಣ ಯಂತ್ರ ಬರಲಿದೆಯೆ?: ಆರು ವರ್ಷಗಳ ಹಿಂದೆ ಅಂದಾಜು ₹20 ಲಕ್ಷ ವೆಚ್ಚದಲ್ಲಿ ರಸ್ತೆ ಬದಿಯ ದೂಳು ಸಂಗ್ರಹಿಸಿ ಸಾಗಿಸುವ ಯಂತ್ರವನ್ನು ನಗರಸಭೆ ಖರೀದಿ ಮಾಡಿತ್ತು. ಆರೇಳು ತಿಂಗಳು ಬಳಸಿ ಅದನ್ನು ಮೂಲೆಯಲ್ಲಿ ಇಡಲಾಗಿತ್ತು. ಈ ಯಂತ್ರದ ಬಳಕೆ ಮತ್ತೆ ಆರಂಭಿಸಿದರೆ ಡಿವೈಡರ್ ಪಕ್ಕದ ಮಣ್ಣನ್ನು ಸಾಗಿಸುವ ಪೌರ ಕಾರ್ಮಿಕರ ಶ್ರಮದ ಉಳಿತಾಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-43-37880683</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ನಗರದ ನಾಗರಿಕರಿಂದ ಹಲವು ಸಂದರ್ಭಗಳಲ್ಲಿ ಟೀಕೆಗೆ ಒಳಗಾಗುವ ನಗರಸಭೆಯವರು, ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಬದಿ ಸಂಗ್ರಹವಾಗಿದ್ದ ಮಣ್ಣು ತೆರವುಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ನಗರದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ಹಾಗೂ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಗಳ ಡಿವೈಡರ್ಗಳ ಪಕ್ಕದಲ್ಲಿ ವರ್ಷದಿಂದ ಶೇಖರವಾಗಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ವಾರದಿಂದ ನಡೆಯುತ್ತಿದೆ.</p>.<p>ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯ ಎಲ್ಐಸಿ ಕಚೇರಿಯಿಂದ ಎಂಕೆಇಟಿ ಶಾಲೆವರೆಗಿನ ಡಿವೈಡರ್ ಹಾಗೂ ಬೀರೂರು-ಸಮ್ಮಸಗಿ ಹೆದ್ದಾರಿಯ ರೈಲ್ವೆ ಫ್ಲೈಓವರ್ನಿಂದ ಬೆಸ್ಕಾಂ ಕಚೇರಿವರೆಗಿನ ಡಿವೈಡರ್ನ ಎರಡೂ ಬದಿಯ ಮಣ್ಣನ್ನು ಬಹುತೇಕ ತೆರವುಗೊಳಿಸಲಾಗಿದೆ.</p>.<p>ವಾಹನಗಳು ಸಂಚರಿಸುವಾಗ ದೂಳು ಏಳುವುದು ಹಾಗೂ ಮಳೆ ಬಂದಾಗ ರಸ್ತೆ ತುಂಬಾ ಮಣ್ಣು ಹರಡಿ ವಾಹನ ಸಂಚಾರಕ್ಕೆ ಕಂಕಟ ಎದುರಾಗುತ್ತಿತ್ತು. ಈ ಮಣ್ಣನ್ನು ಸಾಗಣೆ ಮಾಡಿರುವುದರಿಂದ ಈ ಸಮಸ್ಯೆ ಬಹುತೇಕ ನಿವಾರಣೆಯಾದಂತಾಗಿದೆ.</p>.<p>ದೂಳು ನಿಯಂತ್ರಣ ಯಂತ್ರ ಬರಲಿದೆಯೆ?: ಆರು ವರ್ಷಗಳ ಹಿಂದೆ ಅಂದಾಜು ₹20 ಲಕ್ಷ ವೆಚ್ಚದಲ್ಲಿ ರಸ್ತೆ ಬದಿಯ ದೂಳು ಸಂಗ್ರಹಿಸಿ ಸಾಗಿಸುವ ಯಂತ್ರವನ್ನು ನಗರಸಭೆ ಖರೀದಿ ಮಾಡಿತ್ತು. ಆರೇಳು ತಿಂಗಳು ಬಳಸಿ ಅದನ್ನು ಮೂಲೆಯಲ್ಲಿ ಇಡಲಾಗಿತ್ತು. ಈ ಯಂತ್ರದ ಬಳಕೆ ಮತ್ತೆ ಆರಂಭಿಸಿದರೆ ಡಿವೈಡರ್ ಪಕ್ಕದ ಮಣ್ಣನ್ನು ಸಾಗಿಸುವ ಪೌರ ಕಾರ್ಮಿಕರ ಶ್ರಮದ ಉಳಿತಾಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-43-37880683</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>