ಭತ್ತದ ನಾಟಿ ಸಮುಯದಲ್ಲಿ ಗದ್ದೆಗಳಲ್ಲಿ ಇಲಿಗಳನ್ನು ಕೊಲ್ಲಲು ರೈತರು ಪ್ರತಿ ವರ್ಷ ಆಂಧ್ರಪ್ರದೇಶದಿಂದ ಕರೆಸಿಕೊಳ್ಳುತ್ತಾರೆ. ಎಕರೆಗೆ ಇಂತಿಷ್ಟು ಎಂದು ಕೂಲಿ ನಿಗದಿ ಮಾಡಿ ಕಾರ್ಮಿಕರು ನೀಡುತ್ತಾರೆ. ಜಿಲ್ಲೆಯಲ್ಲೇ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಎರಡು ತಿಂಗಳು ಇಲ್ಲಿಯೇ ಇದ್ದು, ಕೆಲಸ ಮುಗಿದ ನಂತರ ಊರಿಗೆ ತೆರಳುತ್ತಾರೆ. ಆದರೆ ಅವರು ಹೊರಡುವ ವೇಳೆಗೆ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಘೋಷಣೆಯಾಯಿತು. ಇದರಿಂದಾಗಿ ಊರಿಗೆ ಹೋಗಲು ಆಗದೇ ತೊಂದರೆಗೀಡಾಗಿದ್ದಾರೆ.