ಫೆ. 5ರಂದು ಮಾಘ ಮಾಸದ ಶುಕ್ಲ ಭಾರತ ಹುಣ್ಣಿಮೆಯಂದು ದಾಸರು ದೇವಸ್ಥಾನಕ್ಕೆ ಬಂದ ನಂತರ ಪಲ್ಲಕ್ಕಿಯಲ್ಲಿ ಹರಿಹರೇಶ್ವರ ದೇವರ ಉತ್ಸವ ಮೂರ್ತಿ ಕರೆತಂದು ತೇರುಗಡ್ಡೆ ವೃತ್ತದಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತರು ‘ಗೋವಿಂದ, ಗೋವಿಂದ, ಹರ ಹರ ಮಹದೇವ’ ಎಂದು ಹರ್ಷೊದ್ಗಾರ ಮಾಡುತ್ತಾರೆ. ಬೆಳಿಗ್ಗೆ 10.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹರಿಹರೇಶ್ವರನ ಬ್ರಹ್ಮರಥೋತ್ಸವ
ಜರುಗಲಿದೆ.