<p><strong>ಭರಮಸಾಗರ: ‘</strong>ಆರ್ಕೆಸ್ಟ್ರಾ, ನೃತ್ಯ ಕಾರ್ಯಕ್ರಮಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗಣೇಶೋತ್ಸವ ಸಮಾರಂಭದಲ್ಲಿ ಹರಿಕಥೆ, ಭಜನೆ ಕಾರ್ಯಕ್ರಮಗಳ ಆಯೋಜನೆಗೆ ಯುವಕರು ಮುಂದಾಗುತ್ತಿರುವುದು ಶ್ಲಾಘನೀಯ’ ಎಂದು ಶಿಕ್ಷಕ ವಿ. ರಾಜು ಇಜಾರಿ ಹೇಳಿದರು.</p>.<p>ಗ್ರಾಮದ ಎಸ್ಜೆಎಂ ಬಡಾವಣೆಯ ಹಿಂದೂ ಸನಾತನ ಸಾಮ್ರಾಜ್ಯ ಸಮಿತಿ ಗಣಪತಿ ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ಆಯೋಜಿಸಿದ್ದ ‘ಹರಿಕಥೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆಧುನಿಕತೆ ಪ್ರಭಾವದಿಂದ ನಮ್ಮ ಗ್ರಾಮೀಣ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನು ಉಳಿಸಿ ಬೆಳೆಸುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟರು.</p>.<p>ಶಿವಮೊಗ್ಗ ವಿದ್ಯಾನಗರದ ಧರ್ಮರಕ್ಷಕ ಶನೇಶ್ವರಸ್ವಾಮಿ ದೇವಾಲಯದ ಕೀರ್ತನಕಾರ ಮಂಜುನಾಥಸ್ವಾಮಿ, ‘ಭೂಕೈಲಾಸ’ ಪ್ರಸಂಗ ಕುರಿತು ಹರಿಕಥೆ ನಡೆಸಿಕೊಟ್ಟರು. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಚಂದ್ರಶೇಖರ್, ಹಿಂದೂ ಸನಾತನ ಸಾಮ್ರಾಜ್ಯ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭರಮಸಾಗರ: ‘</strong>ಆರ್ಕೆಸ್ಟ್ರಾ, ನೃತ್ಯ ಕಾರ್ಯಕ್ರಮಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗಣೇಶೋತ್ಸವ ಸಮಾರಂಭದಲ್ಲಿ ಹರಿಕಥೆ, ಭಜನೆ ಕಾರ್ಯಕ್ರಮಗಳ ಆಯೋಜನೆಗೆ ಯುವಕರು ಮುಂದಾಗುತ್ತಿರುವುದು ಶ್ಲಾಘನೀಯ’ ಎಂದು ಶಿಕ್ಷಕ ವಿ. ರಾಜು ಇಜಾರಿ ಹೇಳಿದರು.</p>.<p>ಗ್ರಾಮದ ಎಸ್ಜೆಎಂ ಬಡಾವಣೆಯ ಹಿಂದೂ ಸನಾತನ ಸಾಮ್ರಾಜ್ಯ ಸಮಿತಿ ಗಣಪತಿ ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ಆಯೋಜಿಸಿದ್ದ ‘ಹರಿಕಥೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆಧುನಿಕತೆ ಪ್ರಭಾವದಿಂದ ನಮ್ಮ ಗ್ರಾಮೀಣ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನು ಉಳಿಸಿ ಬೆಳೆಸುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟರು.</p>.<p>ಶಿವಮೊಗ್ಗ ವಿದ್ಯಾನಗರದ ಧರ್ಮರಕ್ಷಕ ಶನೇಶ್ವರಸ್ವಾಮಿ ದೇವಾಲಯದ ಕೀರ್ತನಕಾರ ಮಂಜುನಾಥಸ್ವಾಮಿ, ‘ಭೂಕೈಲಾಸ’ ಪ್ರಸಂಗ ಕುರಿತು ಹರಿಕಥೆ ನಡೆಸಿಕೊಟ್ಟರು. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಚಂದ್ರಶೇಖರ್, ಹಿಂದೂ ಸನಾತನ ಸಾಮ್ರಾಜ್ಯ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>