ಬಹುತೇಕ ಗ್ರಾಮಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಬೆಳೆ ನೆಲಕಚ್ಚಿವೆ. ಮಾವು, ಬಾಳೆ, ಅಡಿಕೆ ಮರಗಳಿಗೂ ಹಾನಿಯಾಗಿದೆ. ನಷ್ಟದ ಪ್ರಮಾಣ ಮಂಗಳವಾರ ಹೊಲ ನೋಡಿದ ನಂತರ ಗೊತ್ತಾಗಲಿದೆ. ಹೊಲಗಳಲ್ಲಿ ನೀರು ನಿಂತಿವೆ, ಯಾಂತ್ರಿಕ ಕಟಾವು ಮಾಡುವುದು ಕಷ್ಟ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಫಾಲಾಕ್ಷ, ರೈತರಾದ ಕುಂಬಳೂರು ಆಂಜನೇಯ ಭಾನುವಳ್ಳಿ ಕೊಟ್ರೇಶ್ ತಿಳಿಸಿದರು.