<p>ಮಲೇಬೆನ್ನೂರು: ಸಮೀಪದ ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವನ್ನು ಏ. 2ರಂದು ಮಧ್ಯಾಹ್ನ 12ಕ್ಕೆ ನೆರವೇರಿಸಲಾಗುವುದು ಎಂದು ಮುಜರಾಯಿ ಇಲಾಖೆ ಅಧಿಕಾರಿ, ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಹಾಗೂ ದೇವಾಲಯದ ಆಡಳಿತಾಧಿಕಾರಿ ಆರ್ .ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಮಾರ್ಚ್ 30ರಂದು ಪಂಚರಾತ್ರಾಗಮ ರೀತ್ಯ ಯಾಗಶಾಲಾ ಪ್ರವೇಶ, ಪೂಜಾವಿಧಿ, ನಾಂದಿ, ನವಗ್ರಹ, ಪುಣ್ಯಾಹವಾಚನ, ಅಂಕುರಾರ್ಪಣೆ, ಕಲಶ ಸ್ಥಾಪನೆ, ಹೋಮ– ಹವನ, ಕಂಕಣ ಬಂಧನ, ಅಷ್ಟ ದಿಕ್ಪಾಲಕರಿಗೆ ಬಲಿ ಸಮರ್ಪಣೆ, ಧರ್ಮ ಧ್ವಜಾರೋಹಣ ಮಾಡಲಿದ್ದಾರೆ,</p>.<p>ಮಾರ್ಚ್ 31ರಂದು ಮಂತ್ರ ಪುಷ್ಪ, ಗರುಡೋತ್ಸವ, ಏ. 1ರಂದು ಗಜೋತ್ಸವ, ಏ. 2ರಂದು ಬ್ರಾಹ್ಮೀ ಮುಹೂರ್ತ ಕಲ್ಯಾಣೋತ್ಸವ, ಮಧ್ಯಾಹ್ನ 12ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ.</p>.<p>ಏ. 3ರಂದು ಅವಭ್ರತ, ಓಕಳಿ ಹಾಗೂ ಉತ್ಸವಮೂರ್ತಿ ದಿಬ್ಬದಹಳ್ಳಿ ಗ್ರಾಮ ಸಂದರ್ಶನವಿದೆ. ಏ. 4ರಂದು ಸಂಪ್ರೋಕ್ಷಣೆ ಹಾಗೂ ಏ. 5ರಂದು ಹೆಳವನಕಟ್ಟೆ ಗಿರಿಯಮ್ಮ ಸ್ಮರಣಾರ್ಥ ಪೂಜಾವಿಧಿಯೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-43-1954360141</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲೇಬೆನ್ನೂರು: ಸಮೀಪದ ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವನ್ನು ಏ. 2ರಂದು ಮಧ್ಯಾಹ್ನ 12ಕ್ಕೆ ನೆರವೇರಿಸಲಾಗುವುದು ಎಂದು ಮುಜರಾಯಿ ಇಲಾಖೆ ಅಧಿಕಾರಿ, ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಹಾಗೂ ದೇವಾಲಯದ ಆಡಳಿತಾಧಿಕಾರಿ ಆರ್ .ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಮಾರ್ಚ್ 30ರಂದು ಪಂಚರಾತ್ರಾಗಮ ರೀತ್ಯ ಯಾಗಶಾಲಾ ಪ್ರವೇಶ, ಪೂಜಾವಿಧಿ, ನಾಂದಿ, ನವಗ್ರಹ, ಪುಣ್ಯಾಹವಾಚನ, ಅಂಕುರಾರ್ಪಣೆ, ಕಲಶ ಸ್ಥಾಪನೆ, ಹೋಮ– ಹವನ, ಕಂಕಣ ಬಂಧನ, ಅಷ್ಟ ದಿಕ್ಪಾಲಕರಿಗೆ ಬಲಿ ಸಮರ್ಪಣೆ, ಧರ್ಮ ಧ್ವಜಾರೋಹಣ ಮಾಡಲಿದ್ದಾರೆ,</p>.<p>ಮಾರ್ಚ್ 31ರಂದು ಮಂತ್ರ ಪುಷ್ಪ, ಗರುಡೋತ್ಸವ, ಏ. 1ರಂದು ಗಜೋತ್ಸವ, ಏ. 2ರಂದು ಬ್ರಾಹ್ಮೀ ಮುಹೂರ್ತ ಕಲ್ಯಾಣೋತ್ಸವ, ಮಧ್ಯಾಹ್ನ 12ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ.</p>.<p>ಏ. 3ರಂದು ಅವಭ್ರತ, ಓಕಳಿ ಹಾಗೂ ಉತ್ಸವಮೂರ್ತಿ ದಿಬ್ಬದಹಳ್ಳಿ ಗ್ರಾಮ ಸಂದರ್ಶನವಿದೆ. ಏ. 4ರಂದು ಸಂಪ್ರೋಕ್ಷಣೆ ಹಾಗೂ ಏ. 5ರಂದು ಹೆಳವನಕಟ್ಟೆ ಗಿರಿಯಮ್ಮ ಸ್ಮರಣಾರ್ಥ ಪೂಜಾವಿಧಿಯೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-43-1954360141</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>