ದೇಶದಲ್ಲಿ ಯಾವುದೇ ಮೂಲೆಯಲ್ಲಿ ತೊಂದರೆಯಾದರೂ ಕನ್ನಡಿಗರು ನೆರವು ನೀಡುತ್ತಿದ್ದರು. ಈ ಬಾರಿ ಕನ್ನಡಿಗರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು, ದನ, ಕರು, ಕುರಿಗಳು ಕೊಚ್ಚಿ ಹೋಗಿವೆ. ಬಹಳ ವರ್ಷಗಳ ಪ್ರಯತ್ನದಿಂದಾಗಿ ಉತ್ತರ ಕರ್ನಾಟಕ ಸ್ವಲ್ಪ ಪ್ರಗತಿ ಕಂಡಿತ್ತು. ಈ ಪ್ರವಾಹದಿಂದಾಗಿ ಮತ್ತೆ 10 ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಈಗ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ಕಣ್ಣೀರು ಒರೆಸಬೇಕು ಎಂದರು.