<p><strong>ಹೊನ್ನಾಳಿ</strong>: ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಎಪಿಎಂಸಿವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಚರಂಡಿಗಳ ಮೇಲೆ ಅಳವಡಿಸಿದ್ದ ಸ್ಲ್ಯಾಬ್ಗಳನ್ನು (ಮುಚ್ಚಳ) ಕಳವು ಮಾಡಲಾಗುತ್ತಿದೆ.</p>.<p>‘ರಸ್ತೆ ಬದಿಯಲ್ಲಿ ಒಂದರಿಂದ ಒಂದೂವರೆ ಕಿ.ಮೀ. ಉದ್ದಕ್ಕೆ ಸುಸಜ್ಜಿತ ಚರಂಡಿ ನಿರ್ಮಿಸಿ, ಅದರ ಮೇಲೆ ಸ್ಲ್ಯಾಬ್ಗಳನ್ನು ಹೊದಿಸಲಾಗಿತ್ತು. ಆದರೆ ಮುಕ್ಕಾಲು ಭಾಗದಷ್ಟು ಸ್ಲ್ಯಾಬ್ಗಳು ಮಾಯವಾಗಿವೆ. ಬಹುತೇಕ ವ್ಯಾಪಾರ, ವಹಿವಾಟು ನಡೆಯುವ ಈ ಪ್ರದೇಶದಲ್ಲಿ ಮನೆಗಳು ಅಷ್ಟಾಗಿ ಇಲ್ಲ. ಅಲ್ಲಿ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗುತ್ತಿವೆ. ನಿರ್ಜನ ಪ್ರದೇಶವಾದ್ದರಿಂದ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದ್ದು, ಯಾರೂ ಪ್ರಶ್ನೆ ಮಾಡುವುದಿಲ್ಲ ಎಂಬ ಧೈರ್ಯದಲ್ಲಿ ಸ್ಲ್ಯಾಬ್ಗಳನ್ನು ಕಳ್ಳರು ಹೊತ್ತುಕೊಂಡು ಹೋಗುತ್ತಿದ್ದಾರೆ’ ಎಂದು ಪಟ್ಟಣದ ನಿವಾಸಿ ಕತ್ತಿಗೆ ನಾಗರಾಜ್ ಆರೋಪಿಸಿದ್ದಾರೆ.</p>.<p>‘ಎಂಟರಿಂದ ಹತ್ತು ವರ್ಷಗಳಿಂದ ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಹೀಗೆ ಎತ್ತಿಕೊಂಡು ಹೋದ ಸ್ಲ್ಯಾಬ್ಗಳನ್ನು, ಗೃಹ ನಿರ್ಮಾಣ ಮಾಡುವವರು ತಮ್ಮ ಮನೆಗಳ ಮುಂಭಾಗದ ಚರಂಡಿಗಳ ಮೇಲೆ ಅಳವಡಿಸಿರುವುದು ಕಂಡುಬರುತ್ತಿದೆ. ಚರಂಡಿಗಳ ಮೇಲೆ ಚಪ್ಪಡಿ ಅಳವಡಿಸುವ ಬದಲು, ಸುಲಭವಾಗಿ ಸಿಗುವ ಸ್ಲ್ಯಾಬ್ಗಳನ್ನೇ ತಮ್ಮ ಮನೆಗೆ ಸಾಗಿಸುತ್ತಿದ್ದಾರೆ. ಈ ಬಗ್ಗೆ ಯಾವ ದೂರುಗಳೂ ಸಲ್ಲಿಕೆಯಾಗಿಲ್ಲ. ಸರ್ಕಾರದ ಅನುದಾನದಲ್ಲಿ ಅಳವಡಿಸಿದ ಚರಂಡಿ ಸ್ಲ್ಯಾಬ್ಗಳನ್ನು ಕಿತ್ತುಕೊಂಡು ಹೋಗುತ್ತಾರೆ ಎಂದರೆ ಹೇಗೆ?’ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.</p>.<p>‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವ ಮಾಲೀಕರು, ₹ 10,000ದಷ್ಟು ಹಣ ನೀಡಿ ಚಪ್ಪಡಿ ಕಲ್ಲುಗಳನ್ನು ಖರೀದಿಸುವ ಬದಲು ಕಳವು ಮಾಡುತ್ತಿರುವುದು ವಿಪರ್ಯಾಸ. ಚರಂಡಿಗಳ ಮೇಲೆ ಕಾಂಕ್ರೀಟ್ ಹಾಕಿಸಿಕೊಳ್ಳಲು ಅವರಿಗೆ ಕಷ್ಟವಾಗುತ್ತ ದೆಯೇ?’ ಅಂಥವರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಿ ದಂಡ ವಿಧಿಸಬೇಕು ಎಂಬ ಬೇಡಿಕೆ ಸಾರ್ವಜನಿಕರದ್ದು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.</p>.<h2><strong>‘ಕದ್ದವರ ವಿರುದ್ಧ ದೂರು ದಾಖಲಿಸಿ’</strong></h2><p>ಸ್ಲ್ಯಾಬ್ ನಾಪತ್ತೆಯಾದರೂ ಲೋಕೋಪಯೋಗಿ ಇಲಾಖೆ ಅಥವಾ ಪುರಸಭೆ ಗಮನಹರಿಸಿಲ್ಲ. ಈಗ ಬಹುತೇಕ ಚರಂಡಿಗಳು ತೆರೆದುಕೊಂಡಿವೆ. ಸರ್ಕಾರದ ಹಣ ಪೋಲಾಗುತ್ತಿದ್ದು, ಅಧಿಕಾರಿಗಳು ಇನ್ನೂ ಮೌನ ವಹಿಸಿದರೆ, ಇರುವ ಅಲ್ಪಸ್ವಲ್ಪ ಸ್ಲ್ಯಾಬ್ಗಳೂ ಕಾಣೆಯಾಗುತ್ತವೆ ಎಂದು ಸಾರ್ವಜನಿಕರು ಹೇಳಿದ್ದಾರೆ. </p><p>ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಿ ಕದ್ದವರ ಮೇಲೆ ದೂರು ದಾಖಲಿಸಿ ಅವರಿಂದ ಹಣ ವಸೂಲಿ ಮಾಡಬೇಕು. ಹಾಗೆ ಮಾಡಿದರೆ, ಮುಂದೆ ಇಂತಹ ಕೃತ್ಯಕ್ಕೆ ಯಾರೂ ಮುಂದಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.</p>.<div><blockquote>ಚರಂಡಿ ಮೇಲಿನ ಸ್ಲ್ಯಾಬ್ಗಳನ್ನು ಕಳವು ಮಾಡಿ ಮನೆಗಳಿಗೆ ಅಳವಡಿಸಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಅಥವಾ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು. </blockquote><span class="attribution">–ಟಿ. ಲೀಲಾವತಿ, ಮುಖ್ಯಾಧಿಕಾರಿ, ಹೊನ್ನಾಳಿ ಪುರಸಭೆ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260520-43-1497794424</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ</strong>: ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಎಪಿಎಂಸಿವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಚರಂಡಿಗಳ ಮೇಲೆ ಅಳವಡಿಸಿದ್ದ ಸ್ಲ್ಯಾಬ್ಗಳನ್ನು (ಮುಚ್ಚಳ) ಕಳವು ಮಾಡಲಾಗುತ್ತಿದೆ.</p>.<p>‘ರಸ್ತೆ ಬದಿಯಲ್ಲಿ ಒಂದರಿಂದ ಒಂದೂವರೆ ಕಿ.ಮೀ. ಉದ್ದಕ್ಕೆ ಸುಸಜ್ಜಿತ ಚರಂಡಿ ನಿರ್ಮಿಸಿ, ಅದರ ಮೇಲೆ ಸ್ಲ್ಯಾಬ್ಗಳನ್ನು ಹೊದಿಸಲಾಗಿತ್ತು. ಆದರೆ ಮುಕ್ಕಾಲು ಭಾಗದಷ್ಟು ಸ್ಲ್ಯಾಬ್ಗಳು ಮಾಯವಾಗಿವೆ. ಬಹುತೇಕ ವ್ಯಾಪಾರ, ವಹಿವಾಟು ನಡೆಯುವ ಈ ಪ್ರದೇಶದಲ್ಲಿ ಮನೆಗಳು ಅಷ್ಟಾಗಿ ಇಲ್ಲ. ಅಲ್ಲಿ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗುತ್ತಿವೆ. ನಿರ್ಜನ ಪ್ರದೇಶವಾದ್ದರಿಂದ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದ್ದು, ಯಾರೂ ಪ್ರಶ್ನೆ ಮಾಡುವುದಿಲ್ಲ ಎಂಬ ಧೈರ್ಯದಲ್ಲಿ ಸ್ಲ್ಯಾಬ್ಗಳನ್ನು ಕಳ್ಳರು ಹೊತ್ತುಕೊಂಡು ಹೋಗುತ್ತಿದ್ದಾರೆ’ ಎಂದು ಪಟ್ಟಣದ ನಿವಾಸಿ ಕತ್ತಿಗೆ ನಾಗರಾಜ್ ಆರೋಪಿಸಿದ್ದಾರೆ.</p>.<p>‘ಎಂಟರಿಂದ ಹತ್ತು ವರ್ಷಗಳಿಂದ ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಹೀಗೆ ಎತ್ತಿಕೊಂಡು ಹೋದ ಸ್ಲ್ಯಾಬ್ಗಳನ್ನು, ಗೃಹ ನಿರ್ಮಾಣ ಮಾಡುವವರು ತಮ್ಮ ಮನೆಗಳ ಮುಂಭಾಗದ ಚರಂಡಿಗಳ ಮೇಲೆ ಅಳವಡಿಸಿರುವುದು ಕಂಡುಬರುತ್ತಿದೆ. ಚರಂಡಿಗಳ ಮೇಲೆ ಚಪ್ಪಡಿ ಅಳವಡಿಸುವ ಬದಲು, ಸುಲಭವಾಗಿ ಸಿಗುವ ಸ್ಲ್ಯಾಬ್ಗಳನ್ನೇ ತಮ್ಮ ಮನೆಗೆ ಸಾಗಿಸುತ್ತಿದ್ದಾರೆ. ಈ ಬಗ್ಗೆ ಯಾವ ದೂರುಗಳೂ ಸಲ್ಲಿಕೆಯಾಗಿಲ್ಲ. ಸರ್ಕಾರದ ಅನುದಾನದಲ್ಲಿ ಅಳವಡಿಸಿದ ಚರಂಡಿ ಸ್ಲ್ಯಾಬ್ಗಳನ್ನು ಕಿತ್ತುಕೊಂಡು ಹೋಗುತ್ತಾರೆ ಎಂದರೆ ಹೇಗೆ?’ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.</p>.<p>‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವ ಮಾಲೀಕರು, ₹ 10,000ದಷ್ಟು ಹಣ ನೀಡಿ ಚಪ್ಪಡಿ ಕಲ್ಲುಗಳನ್ನು ಖರೀದಿಸುವ ಬದಲು ಕಳವು ಮಾಡುತ್ತಿರುವುದು ವಿಪರ್ಯಾಸ. ಚರಂಡಿಗಳ ಮೇಲೆ ಕಾಂಕ್ರೀಟ್ ಹಾಕಿಸಿಕೊಳ್ಳಲು ಅವರಿಗೆ ಕಷ್ಟವಾಗುತ್ತ ದೆಯೇ?’ ಅಂಥವರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಿ ದಂಡ ವಿಧಿಸಬೇಕು ಎಂಬ ಬೇಡಿಕೆ ಸಾರ್ವಜನಿಕರದ್ದು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.</p>.<h2><strong>‘ಕದ್ದವರ ವಿರುದ್ಧ ದೂರು ದಾಖಲಿಸಿ’</strong></h2><p>ಸ್ಲ್ಯಾಬ್ ನಾಪತ್ತೆಯಾದರೂ ಲೋಕೋಪಯೋಗಿ ಇಲಾಖೆ ಅಥವಾ ಪುರಸಭೆ ಗಮನಹರಿಸಿಲ್ಲ. ಈಗ ಬಹುತೇಕ ಚರಂಡಿಗಳು ತೆರೆದುಕೊಂಡಿವೆ. ಸರ್ಕಾರದ ಹಣ ಪೋಲಾಗುತ್ತಿದ್ದು, ಅಧಿಕಾರಿಗಳು ಇನ್ನೂ ಮೌನ ವಹಿಸಿದರೆ, ಇರುವ ಅಲ್ಪಸ್ವಲ್ಪ ಸ್ಲ್ಯಾಬ್ಗಳೂ ಕಾಣೆಯಾಗುತ್ತವೆ ಎಂದು ಸಾರ್ವಜನಿಕರು ಹೇಳಿದ್ದಾರೆ. </p><p>ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಿ ಕದ್ದವರ ಮೇಲೆ ದೂರು ದಾಖಲಿಸಿ ಅವರಿಂದ ಹಣ ವಸೂಲಿ ಮಾಡಬೇಕು. ಹಾಗೆ ಮಾಡಿದರೆ, ಮುಂದೆ ಇಂತಹ ಕೃತ್ಯಕ್ಕೆ ಯಾರೂ ಮುಂದಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.</p>.<div><blockquote>ಚರಂಡಿ ಮೇಲಿನ ಸ್ಲ್ಯಾಬ್ಗಳನ್ನು ಕಳವು ಮಾಡಿ ಮನೆಗಳಿಗೆ ಅಳವಡಿಸಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಅಥವಾ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು. </blockquote><span class="attribution">–ಟಿ. ಲೀಲಾವತಿ, ಮುಖ್ಯಾಧಿಕಾರಿ, ಹೊನ್ನಾಳಿ ಪುರಸಭೆ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260520-43-1497794424</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>