ಕುಟುಂಬದ ಸದಸ್ಯೆ ದೊಡ್ಡ ಕೆಂಚಮ್ಮ ಮಾತನಾಡಿ, ‘ಯಾವುದೇ ಆಸ್ತಿಯನ್ನು ಮತ್ತೊಬ್ಬರಿಗೆ ನೋಂದಣಿ ಮಾಡುವಾಗ 13 ವರ್ಷದ ವಂಶವೃಕ್ಷ ಪರಿಗಣಿಸಬೇಕು. ಅದರೆ ಅಂತಹ ಯಾವುದೇ ದಾಖಲೆ ಇಲ್ಲದೇ, ನಿಜವಾದ ಆಸ್ತಿ ವಾರಸುದಾರರು ಬದುಕಿದ್ದರೂ ನಮ್ಮ ಒಪ್ಪಿಗೆ ಇಲ್ಲದೆ ಬೇರೆಯವರಿಂದ ಅಕ್ರಮವಾಗಿ ಆಸ್ತಿ ಪಡೆದಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಡೀ ಕುಟುಂಬ ವಿಷ ಕುಡಿಯುವ ಪರಿಸ್ಥಿತಿ ಬರುತ್ತದೆ. ಸಮಸ್ಯೆ ಪರಿಹರಿಸದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.