‘ಹಳ್ಳಿಯಲ್ಲಿರುವ ಕ್ರಿಕೆಟ್ ಟೂರ್ನಿಗೆ ಹೋಗಲೋ ಬೇಡವೋ ಎಂದು ಶುಕ್ರವಾರ ಜಿಲ್ಲಾಧಿಕಾರಿಯನ್ನು ಕೇಳಿದ್ದೆ. ಒಳಾಂಗಣದ ಕ್ರೀಡೆಗಳಲ್ಲಿ 100ರ ಒಳಗೆ, ಹೊರಾಂಗಣದಲ್ಲಿ ನಡೆಯುವ ಮದುವೆ ಮತ್ತಿತರ ಸಮಾರಂಭಗಳಲ್ಲಿ 200ರ ಒಳಗೆ ಸೇರಬಹುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದರು. ಹೀಗಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮಗಳು, ಕ್ರೀಡೆಗಳಿಗೆ ಅನುಮತಿಯನ್ನು ಯಾರೂ ಪಡೆಯುವುದಿಲ್ಲ. ಟೂರ್ನಿಯಲ್ಲಿ ಓಮೈಕ್ರಾನ್ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನೂ ಆಡಿದ್ದೇನೆ’ ಎಂದು ಶಾಸಕ ರೇಣುಕಾಚಾರ್ಯ ಅವರು ನಿಯಮ ಉಲ್ಲಂಘನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.