<p>ಹೊನ್ನಾಳಿ: ತಾಲ್ಲೂಕಿನ ಗಡಿಗ್ರಾಮ ಅರಕೆರೆ ಎ.ಕೆ. ಕಾಲೊನಿ ಬಳಿ ನಡೆದಿರುವ ಸುಲಿಗೆ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರ 3 ತಂಡಗಳನ್ನು ರಚಿಸಲಾಗಿದೆ. ಗುರುವಾರ ತಡರಾತ್ರಿ ಓಮ್ನಿ ಅಡ್ಡಗಟ್ಟಿದ ದುಷ್ಕರ್ಮಿಗಳು ₹ 38 ಲಕ್ಷ ಸುಲಿಗೆ ಮಾಡಿದ್ದರು.</p>.<p>ಘಟನೆ ವಿವರ: ತಾಲ್ಲೂಕಿನ ಹೊಸಹಳ್ಳಿ 2ನೇ ಕ್ಯಾಂಪ್ನ ನಿವಾಸಿ ಎಸ್.ವಿ. ಮಾಲತೇಶ್ ಶೆಟ್ಟಿ ಅವರು ಹೊಸಪೇಟೆ ಯಲ್ಲಿ ಜಮೀನು ಮಾರಿದ್ದರು. ಇದರಿಂದ ಬಂದಿದ್ದ ₹ 76 ಲಕ್ಷ ಮೊತ್ತವನ್ನು ಎರಡು ಬ್ಯಾಗ್ಗಳಲ್ಲಿರಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದರು.</p>.<p>ರಾತ್ರಿ ವಾಹನ ಅಡ್ಡಗಟ್ಟಿದ ಆರೋಪಿಗಳು ಹೆದರಿಸಿ ಒಂದು ಬ್ಯಾಗ್ ನಲ್ಲಿದ್ದ ₹ 36 ಲಕ್ಷ ನಗದನ್ನು ಸುಲಿಗೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಣವಿದ್ದ ಮತ್ತೊಂದು ಬ್ಯಾಗನ್ನು ಸೀಟಿನ ಕೆಳಗಡೆ ಇಟ್ಟಿದ್ದರಿಂದ ಸುಲಿಗೆಕೋರರ ಕಣ್ಣಿಗೆ ಅದು ಕಂಡಿರಲಿಲ್ಲ ಎಂದು ಎಸ್.ವಿ. ಮಾಲತೇಶ್ ಶೆಟ್ಟಿ ದೂರು ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಈಗಾಗಲೇ 3 ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-43-1783758516</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊನ್ನಾಳಿ: ತಾಲ್ಲೂಕಿನ ಗಡಿಗ್ರಾಮ ಅರಕೆರೆ ಎ.ಕೆ. ಕಾಲೊನಿ ಬಳಿ ನಡೆದಿರುವ ಸುಲಿಗೆ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರ 3 ತಂಡಗಳನ್ನು ರಚಿಸಲಾಗಿದೆ. ಗುರುವಾರ ತಡರಾತ್ರಿ ಓಮ್ನಿ ಅಡ್ಡಗಟ್ಟಿದ ದುಷ್ಕರ್ಮಿಗಳು ₹ 38 ಲಕ್ಷ ಸುಲಿಗೆ ಮಾಡಿದ್ದರು.</p>.<p>ಘಟನೆ ವಿವರ: ತಾಲ್ಲೂಕಿನ ಹೊಸಹಳ್ಳಿ 2ನೇ ಕ್ಯಾಂಪ್ನ ನಿವಾಸಿ ಎಸ್.ವಿ. ಮಾಲತೇಶ್ ಶೆಟ್ಟಿ ಅವರು ಹೊಸಪೇಟೆ ಯಲ್ಲಿ ಜಮೀನು ಮಾರಿದ್ದರು. ಇದರಿಂದ ಬಂದಿದ್ದ ₹ 76 ಲಕ್ಷ ಮೊತ್ತವನ್ನು ಎರಡು ಬ್ಯಾಗ್ಗಳಲ್ಲಿರಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದರು.</p>.<p>ರಾತ್ರಿ ವಾಹನ ಅಡ್ಡಗಟ್ಟಿದ ಆರೋಪಿಗಳು ಹೆದರಿಸಿ ಒಂದು ಬ್ಯಾಗ್ ನಲ್ಲಿದ್ದ ₹ 36 ಲಕ್ಷ ನಗದನ್ನು ಸುಲಿಗೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಣವಿದ್ದ ಮತ್ತೊಂದು ಬ್ಯಾಗನ್ನು ಸೀಟಿನ ಕೆಳಗಡೆ ಇಟ್ಟಿದ್ದರಿಂದ ಸುಲಿಗೆಕೋರರ ಕಣ್ಣಿಗೆ ಅದು ಕಂಡಿರಲಿಲ್ಲ ಎಂದು ಎಸ್.ವಿ. ಮಾಲತೇಶ್ ಶೆಟ್ಟಿ ದೂರು ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಈಗಾಗಲೇ 3 ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-43-1783758516</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>