<p><strong>ಹೊನ್ನಾಳಿ:</strong> ಪಟ್ಟಣದ ರಸ್ತೆಗಳ ಮಧ್ಯದಲ್ಲಿ ಈ ಹಿಂದೆ ನಿರ್ಮಿಸಿದ್ದ ಯುಜಿಡಿ ಗುಂಡಿಗಳಿಗೆ (ಮ್ಯಾನ್ಹೋಲ್) ಮುಚ್ಚಿದ್ದ ಮುಚ್ಚಳಗಳು ಒಡೆದು ಹೋಗಿದ್ದು, ದ್ವಿಚಕ್ರ ವಾಹನ ಸವಾರರನ್ನು ಬಲಿ ತೆಗೆದುಕೊಳ್ಳುವ ಆತಂಕ ಎದುರಾಗಿದೆ.</p>.<p>ಮುಚ್ಚಳದ ಒಂದು ಭಾಗ ಗುಂಡಿಯಲ್ಲಿ ಹುದುಗಿಕೊಂಡಿದ್ದರೆ ಇನ್ನೊಂದು ಭಾಗ ರಸ್ತೆಯಿಂದ ಮೇಲಕ್ಕೆದ್ದಿದೆ. ಕೆಲವು ಭಾಗಗಳಲ್ಲಿ ಅರ್ಧ ವೃತ್ತಾಕಾರದಲ್ಲಿದ್ದು, ಅವುಗಳಿಗೆ ಸ್ಥಳೀಯರು ತಾವೇ ಸಿಮೆಂಟ್ ಹಾಕಿ ಓಡಾಡಲು ತೊಂದರೆಯಾಗದಂತೆ ಸರಿಮಾಡಿಕೊಂಡಿದ್ದಾರೆ. ಕೆಲವೆಡೆ ಒಂದಡಿಯಷ್ಟು ತಗ್ಗು ಉಂಟಾಗಿದ್ದು, ವಾಹನಗಳು ಗುಂಡಿಗೆ ಬಿದ್ದು ಮೇಲೇಳುತ್ತಿವೆ.</p>.<p>ದುರ್ಗಿಗುಡಿ ರಸ್ತೆ ಮಧ್ಯದಲ್ಲಿ ಗುಂಡಿಯ ಆಳ ದೊಡ್ಡದಾಗಿದೆ. ಇಲ್ಲಿ ಸಾಕಷ್ಟು ವಾಹನ ಸವಾರರು ಬಿದ್ದು ಗಾಯಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಷ್ಟಾದರೂ ಈ ಬಗ್ಗೆ ಎಂಜಿನಿಯರ್ಗಳಾಗಲಿ, ಪಟ್ಟಣ ಪಂಚಾಯಿತಿಯ ಅಧಿಕಾರಿಗಳಾಗಲೀ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಜಿಲ್ಲಾಧಿಕಾರಿ ಇವುಗಳತ್ತ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು.</p>.<p>ಕತ್ತಿಗೆ ನಾಗರಾಜ್, ಎಚ್.ಎಂ. ಅರುಣ್ಕುಮಾರ್, ಜಗದೀಶ್ ಕಡದಕಟ್ಟೆ, ಚನ್ನವೀರಪ್ಪ ಗೌಡ, ಹೊನ್ನಾಳಿ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-43-1526518195</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಪಟ್ಟಣದ ರಸ್ತೆಗಳ ಮಧ್ಯದಲ್ಲಿ ಈ ಹಿಂದೆ ನಿರ್ಮಿಸಿದ್ದ ಯುಜಿಡಿ ಗುಂಡಿಗಳಿಗೆ (ಮ್ಯಾನ್ಹೋಲ್) ಮುಚ್ಚಿದ್ದ ಮುಚ್ಚಳಗಳು ಒಡೆದು ಹೋಗಿದ್ದು, ದ್ವಿಚಕ್ರ ವಾಹನ ಸವಾರರನ್ನು ಬಲಿ ತೆಗೆದುಕೊಳ್ಳುವ ಆತಂಕ ಎದುರಾಗಿದೆ.</p>.<p>ಮುಚ್ಚಳದ ಒಂದು ಭಾಗ ಗುಂಡಿಯಲ್ಲಿ ಹುದುಗಿಕೊಂಡಿದ್ದರೆ ಇನ್ನೊಂದು ಭಾಗ ರಸ್ತೆಯಿಂದ ಮೇಲಕ್ಕೆದ್ದಿದೆ. ಕೆಲವು ಭಾಗಗಳಲ್ಲಿ ಅರ್ಧ ವೃತ್ತಾಕಾರದಲ್ಲಿದ್ದು, ಅವುಗಳಿಗೆ ಸ್ಥಳೀಯರು ತಾವೇ ಸಿಮೆಂಟ್ ಹಾಕಿ ಓಡಾಡಲು ತೊಂದರೆಯಾಗದಂತೆ ಸರಿಮಾಡಿಕೊಂಡಿದ್ದಾರೆ. ಕೆಲವೆಡೆ ಒಂದಡಿಯಷ್ಟು ತಗ್ಗು ಉಂಟಾಗಿದ್ದು, ವಾಹನಗಳು ಗುಂಡಿಗೆ ಬಿದ್ದು ಮೇಲೇಳುತ್ತಿವೆ.</p>.<p>ದುರ್ಗಿಗುಡಿ ರಸ್ತೆ ಮಧ್ಯದಲ್ಲಿ ಗುಂಡಿಯ ಆಳ ದೊಡ್ಡದಾಗಿದೆ. ಇಲ್ಲಿ ಸಾಕಷ್ಟು ವಾಹನ ಸವಾರರು ಬಿದ್ದು ಗಾಯಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಷ್ಟಾದರೂ ಈ ಬಗ್ಗೆ ಎಂಜಿನಿಯರ್ಗಳಾಗಲಿ, ಪಟ್ಟಣ ಪಂಚಾಯಿತಿಯ ಅಧಿಕಾರಿಗಳಾಗಲೀ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಜಿಲ್ಲಾಧಿಕಾರಿ ಇವುಗಳತ್ತ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು.</p>.<p>ಕತ್ತಿಗೆ ನಾಗರಾಜ್, ಎಚ್.ಎಂ. ಅರುಣ್ಕುಮಾರ್, ಜಗದೀಶ್ ಕಡದಕಟ್ಟೆ, ಚನ್ನವೀರಪ್ಪ ಗೌಡ, ಹೊನ್ನಾಳಿ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-43-1526518195</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>