‘ತುಂಬಾ ಖುಷಿ ಆಯ್ತು. ನಾನು ಇಷ್ಟೊಂದು ಸುಸಜ್ಜಿತವಾಗಿ ಇರುತ್ತದೆ ಎಂದು ಭಾವಿಸಿರಲಿಲ್ಲ. ಈ ಪಿಂಕ್ ಮತಗಟ್ಟೆಯೊಳಗೆ ಹೊಕ್ಕು, ಹೊರಗೆ ಬರಲು ಮನಸ್ಸು ಆಗಲಿಲ್ಲ. ಈ ಪರಿಕಲ್ಪನೆಯೇ ವಿಭಿನ್ನವಾಗಿತ್ತು. ಸಿಬ್ಬಂದಿಯೂ ಬಹಳ ನಯವಾಗಿ ವರ್ತಿಸಿದರು. ಇದು ಹೀಗೇ ಮುಂದುವರಿಯಬೇಕು’ ಎಂದು ಡಿಸಿಎಂ ಟೌನ್ಶಿಪ್ನ ಬಿ.ವಿ. ಆರತಿ, ಎನ್.ಎಸ್. ಭಾಗ್ಯಾ, ಸುಶೀಲಾ ಮಹಾಂತೇಶ್, ಎನ್.ಶ್ರುತಿ ಹಾಗೂ ಕುಸುಮಾ ಶಿವಕುಮಾರ್ ಅಭಿಪ್ರಾಯಪಟ್ಟರು.