‘ಬಹುತೇಕರು ಈ ಕಾಯಿಲೆಯನ್ನು ಮುಚ್ಚಿಡುತ್ತಾರೆ. ನಾನು ಮುಚ್ಚಿಟ್ಟರೆ ನಾನಾ ಕಾರಣಕ್ಕೆ ನನ್ನಲ್ಲಿಗೆ ಸಿಬ್ಬಂದಿ, ಇತರರು ಬರುತ್ತಾರೆ. ಅವರು ಅಮಾಯಕರಾಗಿರುತ್ತಾರೆ. ಗೊತ್ತಿಲ್ಲದೆಯೇ ನನ್ನಿಂದ ಅವರಿಗೆ ಸೋಂಕು ಹರಡುತ್ತದೆ. ನಾನು ಅದಕ್ಕೆ ಸೋಂಕಿದೆ ಎಂಬುದು ಗೊತ್ತಾದ ಕೂಡಲೇ ಎಲ್ಲರಿಂದ ದೂರ ಉಳಿದೆ. ಬಹಳ ಮಂದಿ ಮುಚ್ಚಿಡುತ್ತಿದ್ದಾರೆ. ಮುಚ್ಚಿಡುವವರ ಮೇಲೆ ಪ್ರಕರಣ ದಾಖಲಿಸಬೇಕು. ಅಷ್ಟೇ ಅಲ್ಲ ಅವರನ್ನು ಬಂಧಿಸಬೇಕು. ಆಗ ಬೇರೆಯವರು ಮುಚ್ಚಿಡುವುದು ತಪ್ಪುತ್ತದೆ’ ಎನ್ನುವುದು ಅವರ ಅಭಿಪ್ರಾಯ.