ಸನ್ಮಾನಿತರಾದ ದಾನಿ ಲಕ್ಷ್ಮಣ್ರಾಜ್ ಕೊಠಾರಿ ಅಭಿಪ್ರಾಯ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಂಸ್ಥೆಯ ದಾನಿಗಳಾದ ಇಂದುಮತಿ, ವಿಜಯ ವೀರಣ್ಣ, ಲಕ್ಷ್ಮೀ, ಡಾ. ಪ್ರಕಾಶ್, ಶೋಭಾ, ಉಷಾ, ತಾರಾ, ಶಾಂತ ಹಾಗೂ ಅವರನ್ನು ಸನ್ಮಾನಿಸಲಾಯಿತು. ‘ವಿಮೋಚನ’ ಹಾಗೂ ‘ಸಾಹಸ್’ ನ ಮಕ್ಕಳು ಬಸವಣ್ಣ, ರಾಧಾಕೃಷ್ಣ, ಅಂಬೇಡ್ಕರ್, ವಿವೇಕಾನಂದ ವೇಷ ಧರಿಸಿ ಸಂಭ್ರಮಿಸಿದರು. ವಿದ್ಯಾರ್ಥಿನಿಯರು ರೇಣುಕಮ್ಮ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಹಾಗೂ ನೃತ್ಯ ಪ್ರದರ್ಶನ ನೀಡಿದರು.