ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಕ್ಷಮಾಗುಣ ಇಲ್ಲದಿದ್ದರೆ ಬದುಕು ರಣರಂಗವಾಗುತ್ತದೆ. ದ್ವೇಷ, ಹೊಟ್ಟೆಕಿಚ್ಚು, ರೋಷಗಳೇ ವಿಜ್ರಂಭಿಸುತ್ತದೆ. ವಿಶ್ವಪ್ರೇಮ ಇದ್ದರೆ ಬದುಕು ವಿಶಾಲ ಹಾಗೂ ಎತ್ತರಕ್ಕೆ ಬೆಳೆಯುತ್ತದೆ. ಬಸವಾದಿ ಶರಣರು, ಬುದ್ಧ, ಅಂಬೇಡ್ಕರ್, ಗಾಂಧಿ, ಏಸು ಎಲ್ಲರೂ ಕ್ಷಮಾಗುಣದಿಂದ ಮಹಾತ್ಮರಾದರು’ ಎಂದು ವಿವರಿಸಿದರು.