ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲು ಒತ್ತಾಯ

Last Updated 13 ಜುಲೈ 2021, 4:46 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಬೀದಿ ಬದಿವ್ಯಾಪಾರಿಗಳಿಗೆವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದಾವಣಗೆರೆ ಜಿಲ್ಲಾ ಫುಟ್ ಪಾತ್ ವ್ಯಾಪಾರಿಗಳ ಸಂಘದ ಸದಸ್ಯರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಗರದಲ್ಲಿ5ಸಾವಿರಕ್ಕೂಹೆಚ್ಚುವ್ಯಾಪಾರಿಗಳುಬೀದಿಬದಿವ್ಯಾಪಾರವನ್ನೇಅವಲಂಬಿಸಿಜೀವನನಡೆಸುತ್ತಿದ್ದಾರೆ.ಕೊರೊನಾದಿಂದಾಗಿ ವ್ಯಾಪಾರ ಇಲ್ಲದೇಸಂಕಷ್ಟದಲ್ಲಿದ್ದಾರೆ.ಇಂತಹ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳುಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ವ್ಯಾಪಾರ ಮಾಡಬಾರದು ಎಂದು ನೋಟೀಸ್ ಕೊಕೊಟ್ಟಿದ್ದಾರೆ. ಇದರಿಂದ ವ್ಯಾಪಾರಿಗಳ ಕುಟುಂಬ ಬೀದಿಗೆ ಬರುವಂತಾಗಿದೆ.5 ಸಾವಿರ ವ್ಯಾಪಾರಿಗಳನ್ನು ನಂಬಿ ಅವರ ಕುಟುಂಬದ 35 ಸಾವಿರ ಜನರು ಬದುಕು ನಡೆಸುತ್ತಿದ್ದಾರೆ. ವ್ಯಾಪಾರ ಮಾಡದಂತೆ ನಿರ್ಬಂಧ ಹೇರಿದರೆ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಬಡ್ಡಿ ಕೊಟ್ಟು ಸಾಲವನ್ನು ತಂದುಬಿಸಿಲು, ಗಾಳಿ, ಮಳೆಎನ್ನದೇ ದುಡಿದುಜೀವನ ನಡೆಸುತ್ತಿದ್ದೇವೆ.ಬೇರೆ ಉದ್ಯೋಗ ಇಲ್ಲ.ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡುತ್ತೇವೆ. ಇದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷಆವರಗೆರೆ ವಾಸು, ಸದಸ್ಯರಾದ ಎನ್.ಟಿ. ಬಸವರಾಜ,ರಹಮತ್ ಉಲ್ಲಾ, ಸುರೇಶಚೌಧರಿ, ಅಲ್ಲಾಬಕ್ಷ್, ದಾದಾಪೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT