ಸಂತೇಬೆನ್ನೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಗುರುವಾರ ಪಿಡಿಒ ಗೋಪಾಲ ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ನೌಕರರಿಗೆ ಸಮರ್ಪಕ ವೇತನ ಶ್ರೇಣಿ ನಿಗದಿ ಪಡಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಸಕಲ ಸೌಲಭ್ಯಗಳನ್ನು ನೀಡಬೇಕು. ನಿವೃತ್ತಿ ಹೊಂದಿದ ಸಿಬ್ಬಂದಿಗೆ ಗ್ರಾಚ್ಯುಟಿ ನೀಡಬೇಕು ಎಂದು ಆಗ್ರಹಿಸಿದರು.
ಬಾಕಿ ಇರುವ ವೇತನ ತಕ್ಷಣ ಬಿಡುಗಡೆಗೊಳಿಸಬೇಕು. ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಹತೆ ಆಧಾರದ ಮೇಲೆ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಎಸ್.ಜೆ. ಶಿವಶಂಕರ, ಎಚ್. ನೂರುಲ್ಲಾ, ಕೆ.ಎಸ್. ಶಶಿಕುಮಾರ್, ಎಂ. ರಹಮತುಲ್ಲಾ, ಕೆ.ಅಯೂಬ್ ಖಾನ್, ಆರ್. ಮಂಜುನಾಥ್, ಎನ್. ನಾಗರಾಜ, ಎ.ಕೆ. ನಾಗರಾಜ್, ಎಸ್. ಸಂತೋಷ್, ಪರಶುರಾಮ ಪಾಲ್ಗೊಂಡಿದ್ದರು.