‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ನೀಡಿದ ವಿದ್ಯಾರ್ಥಿ ವೇತನದಿಂದ ನನಗೆ ಓದು ಮುಂದುವರಿಸಲು ಅನುಕೂಲವಾಯಿತು. ಸದ್ಯ ಗೌರಿಬಿದನೂರು ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವೆ. ಉನ್ನತ ವ್ಯಾಸಂಗದ ಕನಸು ಕಂಡವಳಿಗೆ ಆರ್ಥಿಕ ಸಮಸ್ಯೆ ಆತಂಕ ಮೂಡಿಸಿತ್ತು. ‘ಪ್ರಜಾವಾಣಿ’ ಸಹಾಯ ಅನುಕೂಲ ಕಲ್ಪಿಸಿತು.