‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಸ್ತುತ ವೀರಗಾಸೆ ಕಲಾವಿದರ ತಂಡಕ್ಕೆ ₹20 ಸಾವಿರ ಮತ್ತು ವೃತ್ತಿ ರಂಗಭೂಮಿ ಕಲಾವಿದರಿಗೆ ₹35 ಸಾವಿರ ನೀಡುತ್ತಿದ್ದು, ಇದು ಸಾಲುತ್ತಿಲ್ಲ. ಆದ್ದರಿಂದ ವೀರಗಾಸೆ ಕಲಾವಿದರ ತಂಡಕ್ಕೆ ₹25 ಸಾವಿರದಿಂದ ₹30 ಸಾವಿರಕ್ಕೆ ಮತ್ತು ನಾಟಕ ತಂಡದ ಕಲಾವಿದರಿಗೆ ₹60 ಸಾವಿರ ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು. ಕಲಾವಿದರಾದ ಎಚ್.ಮೆಹಬೂಬ್ ಅಲಿ, ಬಿ.ಹನುಮಂತಚಾರಿ, ಬಿ.ಇ.ತಿಪ್ಪೇಸ್ವಾಮಿ, ಬಲ್ಲೂರು ಮಂಜಪ್ಪ,ಜಿ. ಮೂಗಬಸಪ್ಪ ಇದ್ದರು.