‘ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ನದಿಯಿಂದ ಮರಳು ತೆಗೆಯಲು ಸಾಧ್ಯವಾಗುವುದಿಂದ ಮರಳಿನ ಕೊರತೆ ಎದುರಾಗಿದೆ. ನದಿ ಮರಳಿನಲ್ಲಿ ಶೇ 2ರಿಂದ 5ರವರೆಗೆ ವೇಸ್ಟೇಜ್ ಬರಲಿದೆ. ಮರಳಿಗೆ ಪರ್ಯಾಯವಾಗಿ ಬಳಸುತ್ತಿರುವ ಕಲ್ಲಿನ ಪುಡಿಗಳ (ಎಂ. ಸ್ಯಾಂಡ್) ಗಾತ್ರದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದ ನಿರ್ಮಿಸಿದ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಎಂ.ಸ್ಯಾಂಡ್ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಿ ನಮ್ಮ ಕಂಪನಿಯು ಸಂಶೋಧನೆ ನಡೆಸಿ, ಸ್ಟೀಲ್ ಉತ್ಪಾದನೆ ವೇಳೆ ಲಭಿಸುತ್ತಿದ್ದ ಸ್ಲ್ಯಾಗ್ ಅನ್ನು ಪರಿಸರ ಸ್ನೇಹಿ ಮರಳಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಗುಣಮಟ್ಟಕ್ಕೆ ಐಐಎಸ್ಸಿ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಡಾ. ಮಂಜುನಾಥ್ ತಿಳಿಸಿದರು.