ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದ ಚೇತನ್ ನಂತರ ಇಲ್ಲಿನ ಎಲ್. ಸಿದ್ದಪ್ಪ ಕಿರಿಯ ಕಾಲೇಜಿನಲ್ಲಿ ಕಬಡ್ಡಿ ಬಗ್ಗೆ ಮತ್ತಷ್ಟು ಕಲಿತು ಯುವಕ ಸಂಘದೊಂದಿಗೆ ಶಿಕಾರಿಪುರ, ಹಾವೇರಿ, ಸೊರಬ, ಸಾಗರ, ದಾವಣಗೆರೆ ಮುಂತಾದ ಕಡೆಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.