<p>ಕಡರನಾಯ್ಕನಹಳ್ಳಿ: ಗ್ರಾಮದಲ್ಲಿ ರಾಮನವಮಿ ಮತ್ತು ಸೀತಾರಾಮ ಕಲ್ಯಾಣ ಮಹೋತ್ಸವ ಮಾರ್ಚ್ 27ರಂದು ನಡೆಯಲಿದೆ.</p>.<p>ಬೆಳಿಗ್ಗೆ ರಾಮ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾಲಂಕಾರ ಸೇವೆ ನಡೆಯಲಿದೆ. ಮಧ್ಯಾಹ್ನ ಸೀತಾರಾಮ ಕಲ್ಯಾಣ ಮಹೋತ್ಸವದ ನಂತರ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಗುತ್ತದೆ.</p>.<p>ಸಂಜೆಯಿಂದ ಅನ್ನಸಂತರ್ಪಣೆ ಇರುತ್ತದೆ ಎಂದು ಶ್ರೀ ರಾಮ ದೇವಸ್ಥಾನ ಟ್ರಸ್ಟ್ ಸಮಿತಿಯವರು ತಿಳಿಸಿದ್ದಾರೆ. ಗುರುವಾರ ಶ್ರೀ ರಾಮ ದೇವಸ್ಥಾನದಲ್ಲಿ ಅಷ್ಟೋತ್ತರ ಶತನಾಮಾವಳಿ ಪೂಜೆ ನಡೆಯಿತು. ದೇವಸ್ಥಾನ, ಮುಖ್ಯ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಿ ರಾಮನವಮಿಗೆ ಸಜ್ಜುಗೊಳಿಸಲಾಗಿದೆ.</p>.<p>ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಇಂದಿನಿಂದ</p>.<p>ರಾಮೇಶ್ವರ (ನ್ಯಾಮತಿ): ಗ್ರಾಮದ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಹಾಗೂ ಕುಮಾರಸ್ವಾಮಿ ಭೂತಪ್ಪಸ್ವಾಮಿಯ ಮಣೆವು ಕಾರ್ಯಕ್ರಮಗಳಿಗೆ ಮಾರ್ಚ್ 27ರಂದು ಚಾಲನೆ ನೀಡಲಾಗುವುದು.</p>.<p>27ರಂದು ರಾತ್ರಿ 10 ಗಂಟೆಗೆ ಕಂಕಣ ಧಾರಣೆ, 28ರಂದು ಬೆಳಿಗ್ಗೆ 11ಕ್ಕೆ ಆಚರಣೆ ಹಾಗೂ ರಾತ್ರಿ 8 ಗಂಟೆಗೆ ಪ್ರಸಾದ ವಿನಿಯೋಗವಿರುತ್ತದೆ.</p>.<p>29ರಂದು ಮಲ್ಲಿಕಾರ್ಜುನ ಸ್ವಾಮಿಯ ಹೂವಿನ ರಥೋತ್ಸವ, 30ರಂದು ಮುಂಜಾನೆ 6 ಗಂಟೆಗೆ ಮಲ್ಲಿಕಾರ್ಜುನಸ್ವಾಮಿ ವಿವಾಹ ಮಹೋತ್ಸವ, 6.30ಕ್ಕೆ ಮಹಾ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ಶ್ರೀಕುಮಾರ ರಾಮಸ್ವಾಮಿ, ಭೂತಪ್ಪಸ್ವಾಮಿಯ ಮಣೆವು, ಸಂಜೆ ಓಕಳಿ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.</p>.<p>ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಶ್ರೀರಾಮಚಂದ್ರ ದೇವರ ರಥೋತ್ಸವ ಮಾರ್ಚ್ 27ರಂದು ನೆರವೇರಲಿದೆ.</p>.<p>ಮಾರ್ಚ್ 26ರಂದು ಕಲ್ಯಾಣೋತ್ಸವ, 28ರಂದು ಅವಬೃತ ನಡೆಯಲಿದೆ. ರಥೋತ್ಸವದ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p>ಹೊಸ ಕುಂದುವಾಡ: 28, 29ಕ್ಕೆ ಟಗರು ಕಾಳಗ</p>.<p>ದಾವಣಗೆರೆ: ತಾಲ್ಲೂಕಿನ ಹೊಸ ಕುಂದುವಾಡ ಗ್ರಾಮದಲ್ಲಿ ಏಪ್ರಿಲ್ 7ರಿಂದ 18ರವರೆಗೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಮಾರ್ಚ್ 28 ಹಾಗೂ 29ರಂದು ರಾಜ್ಯಮಟ್ಟದ ಟಗರು ಕಾಳಗ ಆಯೋಜಿಸಲಾಗಿದೆ.</p>.<p>ಗ್ರಾಮಸ್ಥ ರಾಘವೇಂದ್ರ ಬಿ.ಪಿ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>ಮರಿಕುರಿ, 2, 4, 6 ಹಾಗೂ 8 ಹಲ್ಲಿನ ಟಗರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಟಗರು ಕಾಳಗ ಆಯೋಜಿಸಲಾಗುತ್ತಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ರಾಜ್ಯದ ಹೆಸರಾಂತ ಟಗರುಗಳು ಪಾಲ್ಗೊಳ್ಳಲಿವೆ. ₹15,000ದಿಂದ ₹80,000ದವರೆಗೆ ಬಹುಮಾನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಾಳೆಯಿಂದ</p>.<p>ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 1ರವರೆಗೆ ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.</p>.<p>ಮಾರ್ಚ್ 28ರಂದು ಕಂಕಣಧಾರಣೆ ಮಹೋತ್ಸವ ಹಾಗೂ ರಥದ ಗಡ್ಡೆ ಹೊರತೆಗೆಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ. 29ರಂದು ಬೆಳಿಗ್ಗೆ ಉಚ್ಚಾಯ ಹಾಗೂ ಸಾಯಂಕಾಲ ಅರಿಶಿಣ, ಎಣ್ಣೆ ಕೊಡುವ ಕಾರ್ಯಕ್ರಮ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-43-296852930</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಡರನಾಯ್ಕನಹಳ್ಳಿ: ಗ್ರಾಮದಲ್ಲಿ ರಾಮನವಮಿ ಮತ್ತು ಸೀತಾರಾಮ ಕಲ್ಯಾಣ ಮಹೋತ್ಸವ ಮಾರ್ಚ್ 27ರಂದು ನಡೆಯಲಿದೆ.</p>.<p>ಬೆಳಿಗ್ಗೆ ರಾಮ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾಲಂಕಾರ ಸೇವೆ ನಡೆಯಲಿದೆ. ಮಧ್ಯಾಹ್ನ ಸೀತಾರಾಮ ಕಲ್ಯಾಣ ಮಹೋತ್ಸವದ ನಂತರ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಗುತ್ತದೆ.</p>.<p>ಸಂಜೆಯಿಂದ ಅನ್ನಸಂತರ್ಪಣೆ ಇರುತ್ತದೆ ಎಂದು ಶ್ರೀ ರಾಮ ದೇವಸ್ಥಾನ ಟ್ರಸ್ಟ್ ಸಮಿತಿಯವರು ತಿಳಿಸಿದ್ದಾರೆ. ಗುರುವಾರ ಶ್ರೀ ರಾಮ ದೇವಸ್ಥಾನದಲ್ಲಿ ಅಷ್ಟೋತ್ತರ ಶತನಾಮಾವಳಿ ಪೂಜೆ ನಡೆಯಿತು. ದೇವಸ್ಥಾನ, ಮುಖ್ಯ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಿ ರಾಮನವಮಿಗೆ ಸಜ್ಜುಗೊಳಿಸಲಾಗಿದೆ.</p>.<p>ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಇಂದಿನಿಂದ</p>.<p>ರಾಮೇಶ್ವರ (ನ್ಯಾಮತಿ): ಗ್ರಾಮದ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಹಾಗೂ ಕುಮಾರಸ್ವಾಮಿ ಭೂತಪ್ಪಸ್ವಾಮಿಯ ಮಣೆವು ಕಾರ್ಯಕ್ರಮಗಳಿಗೆ ಮಾರ್ಚ್ 27ರಂದು ಚಾಲನೆ ನೀಡಲಾಗುವುದು.</p>.<p>27ರಂದು ರಾತ್ರಿ 10 ಗಂಟೆಗೆ ಕಂಕಣ ಧಾರಣೆ, 28ರಂದು ಬೆಳಿಗ್ಗೆ 11ಕ್ಕೆ ಆಚರಣೆ ಹಾಗೂ ರಾತ್ರಿ 8 ಗಂಟೆಗೆ ಪ್ರಸಾದ ವಿನಿಯೋಗವಿರುತ್ತದೆ.</p>.<p>29ರಂದು ಮಲ್ಲಿಕಾರ್ಜುನ ಸ್ವಾಮಿಯ ಹೂವಿನ ರಥೋತ್ಸವ, 30ರಂದು ಮುಂಜಾನೆ 6 ಗಂಟೆಗೆ ಮಲ್ಲಿಕಾರ್ಜುನಸ್ವಾಮಿ ವಿವಾಹ ಮಹೋತ್ಸವ, 6.30ಕ್ಕೆ ಮಹಾ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ಶ್ರೀಕುಮಾರ ರಾಮಸ್ವಾಮಿ, ಭೂತಪ್ಪಸ್ವಾಮಿಯ ಮಣೆವು, ಸಂಜೆ ಓಕಳಿ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.</p>.<p>ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಶ್ರೀರಾಮಚಂದ್ರ ದೇವರ ರಥೋತ್ಸವ ಮಾರ್ಚ್ 27ರಂದು ನೆರವೇರಲಿದೆ.</p>.<p>ಮಾರ್ಚ್ 26ರಂದು ಕಲ್ಯಾಣೋತ್ಸವ, 28ರಂದು ಅವಬೃತ ನಡೆಯಲಿದೆ. ರಥೋತ್ಸವದ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p>ಹೊಸ ಕುಂದುವಾಡ: 28, 29ಕ್ಕೆ ಟಗರು ಕಾಳಗ</p>.<p>ದಾವಣಗೆರೆ: ತಾಲ್ಲೂಕಿನ ಹೊಸ ಕುಂದುವಾಡ ಗ್ರಾಮದಲ್ಲಿ ಏಪ್ರಿಲ್ 7ರಿಂದ 18ರವರೆಗೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಮಾರ್ಚ್ 28 ಹಾಗೂ 29ರಂದು ರಾಜ್ಯಮಟ್ಟದ ಟಗರು ಕಾಳಗ ಆಯೋಜಿಸಲಾಗಿದೆ.</p>.<p>ಗ್ರಾಮಸ್ಥ ರಾಘವೇಂದ್ರ ಬಿ.ಪಿ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>ಮರಿಕುರಿ, 2, 4, 6 ಹಾಗೂ 8 ಹಲ್ಲಿನ ಟಗರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಟಗರು ಕಾಳಗ ಆಯೋಜಿಸಲಾಗುತ್ತಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ರಾಜ್ಯದ ಹೆಸರಾಂತ ಟಗರುಗಳು ಪಾಲ್ಗೊಳ್ಳಲಿವೆ. ₹15,000ದಿಂದ ₹80,000ದವರೆಗೆ ಬಹುಮಾನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಾಳೆಯಿಂದ</p>.<p>ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 1ರವರೆಗೆ ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.</p>.<p>ಮಾರ್ಚ್ 28ರಂದು ಕಂಕಣಧಾರಣೆ ಮಹೋತ್ಸವ ಹಾಗೂ ರಥದ ಗಡ್ಡೆ ಹೊರತೆಗೆಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ. 29ರಂದು ಬೆಳಿಗ್ಗೆ ಉಚ್ಚಾಯ ಹಾಗೂ ಸಾಯಂಕಾಲ ಅರಿಶಿಣ, ಎಣ್ಣೆ ಕೊಡುವ ಕಾರ್ಯಕ್ರಮ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-43-296852930</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>