<p><strong>ದಾವಣಗೆರೆ:</strong> ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ, ಕವಯತ್ರಿ ಅರುಂಧತಿ ರಮೇಶ್ (76) ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. </p>.<p>ಇವರಿಗೆ ಪುತ್ರ ಮಂಜುನಾಥ್ ಇದ್ದಾರೆ. ಅರುಂಧತಿ ಅವರ ಅಪೇಕ್ಷೆಯಂತೆ ಮೃತದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. </p>.<p>1950ರ ಜೂನ್ 9ರಂದು ಚಿತ್ರದುರ್ಗದ ಹಿರಿಯೂರಿನಲ್ಲಿ ಅರುಂಧತಿ ಜನಿಸಿದ್ದರು. ದಾವಣಗೆರೆಯ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. </p>.<p>‘ಚಿತ್ರಚಾತಕ’, ‘ಮಡಿಲು’, ‘ಪರಾಗಸ್ಪರ್ಶಕ್ಕೆ ಕಾದ ಕವನ’, ‘ತೇಲಿ ಬಿಟ್ಟ ದ್ವೀಪ’ ಕವನ ಸಂಕಲನಗಳನ್ನು ರಚಿಸಿದ್ದರು. ‘ರೊಮ್ಯಾಂಟಿಕ್ ಕಥೆಯೊಂದರ ಕೊನೆ’ (ಕಥಾ ಸಂಕಲನ), ‘ಬಗೆದಷ್ಟು ಬಾನು’ (ಬಿಡಿಲೇಖನಗಳು) ಹಾಗೂ ‘ಭವದ ಬೆಳಕು’ (ಸಮಗ್ರ ಸಾಹಿತ್ಯ) ಕೃತಿಗಳನ್ನು ರಚಿಸಿದ್ದಾರೆ. </p>.<p>ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಬೇಂದ್ರೆ- ಅಡಿಗ ಪ್ರಶಸ್ತಿ, ಮಹಾಲಕ್ಷ್ಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಗೌರವ, ಮುಂಬೈನ ಆರ್. ಸುಶೀಲದೇವಿ ಶೆಟ್ಟಿ ಕಾವ್ಯ ಪ್ರಶಸ್ತಿ, ದಾವಣಗೆರೆ ವನಿತಾ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. </p>.<p>ಪತಿ, ಸಾಹಿತಿ ಬಿ.ಎಂ.ರಮೇಶ್ ಅವರು 1993ರಲ್ಲಿ ನಿಧನ ಹೊಂದಿದ್ದರು. ಅರುಂಧತಿ ಅವರು ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ, ಕವಯತ್ರಿ ಅರುಂಧತಿ ರಮೇಶ್ (76) ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. </p>.<p>ಇವರಿಗೆ ಪುತ್ರ ಮಂಜುನಾಥ್ ಇದ್ದಾರೆ. ಅರುಂಧತಿ ಅವರ ಅಪೇಕ್ಷೆಯಂತೆ ಮೃತದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. </p>.<p>1950ರ ಜೂನ್ 9ರಂದು ಚಿತ್ರದುರ್ಗದ ಹಿರಿಯೂರಿನಲ್ಲಿ ಅರುಂಧತಿ ಜನಿಸಿದ್ದರು. ದಾವಣಗೆರೆಯ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. </p>.<p>‘ಚಿತ್ರಚಾತಕ’, ‘ಮಡಿಲು’, ‘ಪರಾಗಸ್ಪರ್ಶಕ್ಕೆ ಕಾದ ಕವನ’, ‘ತೇಲಿ ಬಿಟ್ಟ ದ್ವೀಪ’ ಕವನ ಸಂಕಲನಗಳನ್ನು ರಚಿಸಿದ್ದರು. ‘ರೊಮ್ಯಾಂಟಿಕ್ ಕಥೆಯೊಂದರ ಕೊನೆ’ (ಕಥಾ ಸಂಕಲನ), ‘ಬಗೆದಷ್ಟು ಬಾನು’ (ಬಿಡಿಲೇಖನಗಳು) ಹಾಗೂ ‘ಭವದ ಬೆಳಕು’ (ಸಮಗ್ರ ಸಾಹಿತ್ಯ) ಕೃತಿಗಳನ್ನು ರಚಿಸಿದ್ದಾರೆ. </p>.<p>ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಬೇಂದ್ರೆ- ಅಡಿಗ ಪ್ರಶಸ್ತಿ, ಮಹಾಲಕ್ಷ್ಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಗೌರವ, ಮುಂಬೈನ ಆರ್. ಸುಶೀಲದೇವಿ ಶೆಟ್ಟಿ ಕಾವ್ಯ ಪ್ರಶಸ್ತಿ, ದಾವಣಗೆರೆ ವನಿತಾ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. </p>.<p>ಪತಿ, ಸಾಹಿತಿ ಬಿ.ಎಂ.ರಮೇಶ್ ಅವರು 1993ರಲ್ಲಿ ನಿಧನ ಹೊಂದಿದ್ದರು. ಅರುಂಧತಿ ಅವರು ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>