ಸಂಜೆ 6 ಗಂಟೆಯ ಹೊತ್ತಿಗೆ ಗುಡುಗು ಸಿಡಿಲಿನೊಂದಿಗೆ ಮಳೆ ಶುರುವಾದ ಮಳೆ ಎಡೆಬಿಡದೆ ಸುರಿಯತೊಡಗಿತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನೀರಿನಿಂದ ಆವೃತಗೊಂಡಿದೆ. ನೀಲಮ್ಮನ ತೋಟ, ಬೂದಾಳ್ ರಸ್ತೆ, ಎಸ್ಎಂ ಕೃಷ್ಣನಗರ ಸಹಿತ ಹಲವೆಡೆ ನೀರು ನುಗ್ಗಿದೆ. ನಿಟುವಳ್ಳಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೇ ಕಾಲುವೆಗಳಂತಾದವು.