ಆರಂಭದಲ್ಲಿ ಮೇದಾರ ಸಮಾಜದಿಂದ ಮುರುಘಾಶ್ರೀಗಳಿಗೆ ಗೌರವಾರ್ಪಣೆ ಮಾಡಿದರು. ಬಳಿಕ ದೀಕ್ಷೆಗಾಗಿ ಸಾಧಕರನ್ನು ಕರೆತರಲಾಯಿತು. ಕಾವಿಗೆ ವಿಭೂತಿ ಹಚ್ಚಿದ ಬಳಿಕ ಕಾವಿ ಧರಿಸಲು ಕಳುಹಿಸಲಾಯಿತು. ಸಾಧಕರು ಕಾವಿ ಧರಿಸಿ ಬಂದ ಬಳಿಕ ವಿಭೂತಿ ಹಚ್ಚಿದ ಬಳಿಕ ಪ್ರಣವ ಸಂಬಂಧ, ಆಜ್ಞಾಚಕ್ರ ಉದ್ದೀಪನ, ಲಿಂಗದೀಕ್ಷೆ, ಮಂತ್ರೋಪದೇಶ, ಲಿಂಗ ಮಜ್ಜನ, ಲಿಂಗ ನಿರೀಕ್ಷಣೆ (ಶಿವಯೋಗ) ಬೋಧಿಸಲಾಯಿತು.