‘ಇನ್ಸೈಟ್ಸ್ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ. ವಿನಯಕುಮಾರ್, ‘ನಮ್ಮ ಸಂಸ್ಥೆಯಿಂದ ಬೆಂಗಳೂರು, ಮಂಗಳೂರು, ವಿಜಯನಗರ, ದೆಹಲಿ, ಲಖನೌ ಹಾಗೂ ಇತರ ನಗರಗಳಲ್ಲಿ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಈಗ ಕಾಗಿನೆಲೆ ಕನಕ ಶಾಖಾ ಮಠದ ಆವರಣದಲ್ಲೂ ಕೇಂದ್ರವನ್ನು ಮುನ್ನಡೆಸಲಿದ್ದೇವೆ. ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿಗಳು ಕೇವಲ ಗುಮಾಸ್ತ, ಪೊಲೀಸ್ ಕಾನ್ಸ್ಟೆಬಲ್ ಆಗುವುದಕ್ಕೆ ಸೀಮಿತವಾಗಬಾರದು. ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆ ಎದುರಿಸಿ ಉನ್ನತ ಹುದ್ದೆಗಳಿಗೆ ನೇಮಕಾತಿ ಹೊಂದಬೇಕು’ ಎಂದು ಆಶಿಸಿದರು.