ನಿವೃತ್ತಿಯಾದ ಮೇಲೆ ಹೊನ್ನಾಳಿಯಲ್ಲಿ ಮನೆ ಕಟ್ಟಿಕೊಂಡಿರುವ ಅವರು ಪಿಂಚಣಿ ಪಡೆದು ಅರಾಮಾಗಿ ಕೂತು ಕಾಲ ಕಳೆಯಬಹುದಾಗಿತ್ತು. ಆದರೆ, ಮನೆಯಲ್ಲಿ ಕೂರದೇ ಆಳು ಕಾಳುಗಳನ್ನು ಇಟ್ಟುಕೊಂಡು ಕೃಷಿ ಜೀವನ ನಡೆಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಮಗ ಸೊಸೆ ಎಂಜಿನಿಯರ್ ಆಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಚಿಕ್ಕಮಗನೂ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಮಕ್ಕಳು ತೋಟ ನೋಡಿಕೊಂಡು ಹೋಗಬೇಕು ಎನ್ನುವುದು ಅವರ ಆಶಯ.