ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಣ್ಣನವರ ‘ಅಂದು ಆಯೋಜನೆಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಸರ್ಕಾರಿ ಕಾರ್ಯಕ್ರಮದಲ್ಲಿ ಅಬ್ಬಯ್ಯ ರೈತಭವನಕ್ಕೆ ರೈತರು ಜಾಗ ನೀಡಿದ್ದಾರೆ. ಆದ್ದರಿಂದ ರೈತರಿಗೆ ಈ ಭವನ ಕೊಡಲಾಗುವುದು ಎಂದು ಹೇಳಿದ್ದರು. ಇದು ಸುಳ್ಳು, ಆ ಭವನ ರೈತರಿಗೆ ಕೊಡಬೇಕೊ; ಮಹಿಳಾ ಭವನ ಮಾಡಬೇಕೊ ಎನ್ನುವುದರ ಬಗ್ಗೆ ನಿರ್ಧಾರವೇ ಆಗಿಲ್ಲ. ಯಾವ ರೈತರೂ ಅದಕ್ಕೆ ಜಾಗ ನೀಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಎದುರು ಸುಳ್ಳು ಹೇಳಿ ಅಬ್ಬಯ್ಯ ಜನರ ದಿಕ್ಕು ತಪ್ಪಿಸಿದ್ದಾರೆ. ರೈತರು ಜಾಗ ಕೊಟ್ಟಿದ್ದರೆ ಕೊಟ್ಟವರು ಮುಂದೆ ಬರಲಿ’ ಎಂದು ಸವಾಲು ಹಾಕಿದರು.