ಮಾವಿನಕಟ್ಟೆ(ಚನ್ನಗಿರಿ): ತಾಲ್ಲೂಕು ಮಾವಿನಕಟ್ಟೆ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾದೇನಹಳ್ಳಿ, ಸಾರಥಿ ಹೊಸೂರು ಹಾಗೂ ಮಾವಿನಕಟ್ಟೆ ಗ್ರಾಮಗಳಲ್ಲಿ ಹದಿನೈದು ದಿನಗಳಿಂದ ಚಿರತೆಯ ಕಾಟ ಶುರುವಾಗಿದೆ. ಪ್ರತಿ ದಿನ ಈ ಗ್ರಾಮಗಳಲ್ಲಿ ಶ್ವಾನಗಳನ್ನು ಚಿರತೆ ಎಳೆದುಕೊಂಡು ಹೋಗಿ ಭಕ್ಷಿಸುತ್ತಿರುವುದು ಈ ಗ್ರಾಮಗಳ ಜನರು ತತ್ತರಗೊಳ್ಳುವಂತೆ ಮಾಡಿದೆ.