ಸಂವಿಧಾನ ಬದಲಾವಣೆ ಮಾತು ಇಂದು ಹೆಚ್ಚು ಕೇಳಿಬರುತ್ತಿದೆ. ಸಂವಿಧಾನವೇ ಹೋದರೆ ಪ್ರತ್ಯೇಕ ಧರ್ಮದ ಮಾನ್ಯತೆ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ‘ಇಂದು ದಿನಕ್ಕೊಂದು ಕಾನೂನು ಬರುತ್ತಿದೆ. ಸಂವಿಧಾನ ಅಪಾಯದಲ್ಲಿದೆ. ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ದಮನ ಮಾಡುವ ಮನು ಪ್ರೇರಿತ ಸಂವಿಧಾನ ಬರುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.