‘ಎಸ್.ಎಸ್. ಮಾಲ್ ಸಹಿತ ಸರ್ಕಾರಿ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಕಟ್ಟಡವನ್ನು ಕಟ್ಟಿರುವುದನ್ನು ತೆರವು
ಗೊಳಿಸಲಾಗುವುದು. ಇದರಲ್ಲಿ ಎಸ್.ಎಸ್. ಗಣೇಶ್ ಅವರಿಗೆ ಸೇರಿದ ಎಸ್.ಎಸ್. ಮಾಲ್ ಕೂಡಾ ಸೇರಿದೆ. ಈಗ ಅನಾಮಧೇಯ ಪತ್ರ ಬಂದಿದೆ. ಎಸ್.ಎಸ್. ಮಾಲ್ ಅನ್ನು ಧ್ವಂಸ ಮಾಡಿ ನೋಡು, ನಿನ್ನನ್ನು ಜೀವ ಸಹಿತ ನಿರ್ವಂಶ ಮಾಡಿ ಬಿಡುತ್ತೇನೆ ಎಂದು ಅವಾಚ್ಯವಾಗಿ ಬೈದು ಬರೆಯಲಾಗಿದೆ. ಹಿಂದೆ ಮಹಾದೇವ ಅನ್ನುವವರು ಇದರ ವಿರುದ್ಧ ಹೋರಾಟ ಮಾಡಿದ್ದರು. ಆಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಳಿಕ ಅವರು ಮೃತಪಟ್ಟಿದ್ದರು. ಅದೇ ರೀತಿ ನನಗೆ ಜೀವ ಬೆದರಿಕೆ ಬಂದಿದೆ. ಇದರ ಹಿಂದೆ ಎಸ್.ಎಸ್. ಮಾಲ್ನ ಮಾಲೀಕರ ಕೈವಾಡ ಇರುವ ಬಗ್ಗೆ ಸಂಶಯವಿದೆ’ ಎಂದು ರಾಜನಹಳ್ಳಿ ಶಿವಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.