ದಾವಣಗೆರೆ ತಾಲ್ಲೂಕಿನಲ್ಲಿ 4 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು,₹ 20,800 ನಷ್ಟ ಸಂಭವಿಸಿದೆ. 4 ಎಕರೆ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು ₹ 60,000 ನಷ್ಟವಾಗಿದೆ. ಚನ್ನಗಿರಿ ಯಲ್ಲಿ 1 ಎಕರೆ ಮೆಕ್ಕೆಜೋಳ ಹಾನಿಯಾಗಿದ್ದು ₹ 30,000 ನಷ್ಟ ಸಂಭವಿಸಿದೆ. ಜಗಳೂರಿನಲ್ಲಿ 12 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ₹ 80,000 ಹಾಗೂ 35 ಎಕರೆ ಮೆಕ್ಕೆಜೋಳ, ಶೇಂಗಾ ಬೆಳೆ ಹಾನಿ ಯಾಗಿದ್ದು ₹ 1.20 ಲಕ್ಷ ನಷ್ಟ ಸಂಭವಿ ಸಿದೆ.ಜಿಲ್ಲೆಯಲ್ಲಿ ಒಟ್ಟು₹ 3,10,800 ನಷ್ಟ ಸಂಭವಿಸಿದ್ದು, ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.