ನಗರದಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ವೀರಶೈವ ಲಿಂಗಾಯತ ಎಂಬ ಸ್ಥಾನಮಾನ ನೀಡುವುದನ್ನು ನಾವು ವಿರೋಧಿಸಿಲ್ಲ. ಬಡವರ ಶಿಕ್ಷಣದ ಹಿತದೃಷ್ಟಿಯಿಂದ ಸ್ವತಂತ್ರ ಧರ್ಮವಾಗಬೇಕು. ಅದು ಶಾಂತಿಯುತ ಹೋರಾಟದಿಂದ ಸಾಧ್ಯವಾಗಬೇಕು. ಆದರೆ, ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.