ಬೆಳ್ತಂಗಡಿ ಯುನಿಕ್ ಎಜು ಸ್ಕಿಲ್ಸ್ ಕಾಲೇಜಿನ ನಿರ್ದೇಶಕ ಸಲೀನ್, ‘ಬೀಜ ಮೊಳಕೆಯೊಡೆದು ಉತ್ತಮ ಗಿಡವಾಗಲು ಭೂಮಿಯ ಫಲವತ್ತತೆ ಎಷ್ಟು ಮುಖ್ಯವೋ ಉನ್ನತ ವ್ಯಾಸಂಗಕ್ಕೆ ದೊರಕುವ ಕಾಲೇಜಿನ ವಾತಾವರಣವೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಕಟೀಲ್ ಅಶೋಕ್ ಪೈ ಕಾಲೇಜು ಉನ್ನತ ವ್ಯಾಸಂಗಕ್ಕೆ ಉತ್ತಮ ವಾತಾವರಣ ಹೊಂದಿದೆ. ಅದರಲ್ಲೂ ಇಂಗ್ಲಿಷ್ ಸಾಹಿತ್ಯಕ್ಕೆ ಇಲ್ಲಿ ಪೂರಕವಾದ ವಾತಾವರಣವಿದೆ’ ಎಂದು ಅಭಿಪ್ರಾಯಪಟ್ಟರು.