<p><strong>ಮಲೇಬೆನ್ನೂರು: </strong>ಪಟ್ಟಣದ ಪುರಸಭೆ ವತಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ವಿರೋಧಿಸಿ <em>ಕೊಮಾರನಹಳ್ಳಿ </em>ಗ್ರಾಮಸ್ಥರು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾರಣ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದೆ.</p>.<p>ಗ್ರಾಮಸ್ಥರು ಸಂತ ಸೇವಾಲಾಲ್ ಹಾಗೂ ಅಂಬೇಡ್ಕರ್ ಭಾವಚಿತ್ರದೊಂದಿಗೆ ಧರಣಿ ಆರಂಭಿಸಿದರು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ಆರಂಭಿಸಿ ಭೂಮಿ ಅಗೆದು ಬುನಾದಿ ಹಾಗೂ ಕಬ್ಬಿಣದ ಸರಳಿನ ಕಂಬ ನಿಲ್ಲಿಸಿ ಕಾಂಕ್ರೀಟ್ ಹಾಕಿದರು.</p>.<p>‘ಪುರಸಭೆ ಕಚೇರಿ ಬೇಕಾದರೆ ನಿರ್ಮಿಸಿ, ಶಾಲೆ– ಕಾಲೇಜು, ವಸತಿ ನಿಲಯ ಸ್ಥಾಪಿಸಲು ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬೇಡಿ’ ಎಂದು ಐರಣಿ ಮಹೇಶ್ ಮನವಿ ಮಾಡಿದರು.</p>.<p>‘ಪಟ್ಟಣದಲ್ಲಿ ಗೋಮಾಳ ಜಮೀನು ಸಾಕಷ್ಟು ಇದ್ದು, ಅಲ್ಲಿ ಘಟಕ ಸ್ಥಾಪಿಸಿಕೊಳ್ಳಿ. ನಮ್ಮ ಊರಿನ ಗಡಿಗೆ ಕಸ ಹಾಕಬೇಡಿ. ನಮ್ಮ ಗಡಿ ರಕ್ಷಣೆ ನಮ್ಮ ಹಕ್ಕು’ ಎಂಬ ಭಿತ್ತಿ ಪತ್ರ ಅಂಟಿಸಿದರು.</p>.<p>ಉಪತಹಶೀಲ್ದಾರ್ ಆರ್.ರವಿ, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಜೆಇ ರಾಘವೇಂದ್ರ, ಬಿಜೆಪಿ ಮುಖಂಡರಾದ ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಹಿಂಸಗಟ್ಟೆ ಲಿಂಗರಾಜ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.</p>.<p>ಜಗದೀಶ್ ನಾಯ್ಕ, ಪರಮೇಶ, ರಂಗನಾಥ, ಬಸವರಾಜ್, ಅಣ್ಣಪ್ಪ ನಾಯ್ಕ, ರಾಜಾ ನಾಯ್ಕ, ಮೀನಾಕ್ಷಿ ಬಾಯಿ, ಕಮಲಾಬಾಯಿ, ಸುಧಾಬಾಯಿ, ಸರೋಜಾಬಾಯಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿ ನಿರತ ಇಬ್ಬರು ಅಸ್ವಸ್ಥರಾದರು. ಬಿಸಿಲಿನ ಝಳದಿಂದ ಸುಸ್ತಾಗಿದ್ದವರನ್ನು ಮನೆಗೆ ಕಳುಹಿಸಿದರು.</p>.<p>ಪಿಎಸ್ಐ ಹಾರೂನ್ ಅಖ್ತರ್, ಶ್ರೀಪತಿ ಗಿನ್ನಿ, ಎಎಸ್ಐ ಶ್ರೀನಿವಾಸ್ ಸೇರಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಪಟ್ಟಣದ ಪುರಸಭೆ ವತಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ವಿರೋಧಿಸಿ <em>ಕೊಮಾರನಹಳ್ಳಿ </em>ಗ್ರಾಮಸ್ಥರು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾರಣ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದೆ.</p>.<p>ಗ್ರಾಮಸ್ಥರು ಸಂತ ಸೇವಾಲಾಲ್ ಹಾಗೂ ಅಂಬೇಡ್ಕರ್ ಭಾವಚಿತ್ರದೊಂದಿಗೆ ಧರಣಿ ಆರಂಭಿಸಿದರು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ಆರಂಭಿಸಿ ಭೂಮಿ ಅಗೆದು ಬುನಾದಿ ಹಾಗೂ ಕಬ್ಬಿಣದ ಸರಳಿನ ಕಂಬ ನಿಲ್ಲಿಸಿ ಕಾಂಕ್ರೀಟ್ ಹಾಕಿದರು.</p>.<p>‘ಪುರಸಭೆ ಕಚೇರಿ ಬೇಕಾದರೆ ನಿರ್ಮಿಸಿ, ಶಾಲೆ– ಕಾಲೇಜು, ವಸತಿ ನಿಲಯ ಸ್ಥಾಪಿಸಲು ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬೇಡಿ’ ಎಂದು ಐರಣಿ ಮಹೇಶ್ ಮನವಿ ಮಾಡಿದರು.</p>.<p>‘ಪಟ್ಟಣದಲ್ಲಿ ಗೋಮಾಳ ಜಮೀನು ಸಾಕಷ್ಟು ಇದ್ದು, ಅಲ್ಲಿ ಘಟಕ ಸ್ಥಾಪಿಸಿಕೊಳ್ಳಿ. ನಮ್ಮ ಊರಿನ ಗಡಿಗೆ ಕಸ ಹಾಕಬೇಡಿ. ನಮ್ಮ ಗಡಿ ರಕ್ಷಣೆ ನಮ್ಮ ಹಕ್ಕು’ ಎಂಬ ಭಿತ್ತಿ ಪತ್ರ ಅಂಟಿಸಿದರು.</p>.<p>ಉಪತಹಶೀಲ್ದಾರ್ ಆರ್.ರವಿ, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಜೆಇ ರಾಘವೇಂದ್ರ, ಬಿಜೆಪಿ ಮುಖಂಡರಾದ ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಹಿಂಸಗಟ್ಟೆ ಲಿಂಗರಾಜ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.</p>.<p>ಜಗದೀಶ್ ನಾಯ್ಕ, ಪರಮೇಶ, ರಂಗನಾಥ, ಬಸವರಾಜ್, ಅಣ್ಣಪ್ಪ ನಾಯ್ಕ, ರಾಜಾ ನಾಯ್ಕ, ಮೀನಾಕ್ಷಿ ಬಾಯಿ, ಕಮಲಾಬಾಯಿ, ಸುಧಾಬಾಯಿ, ಸರೋಜಾಬಾಯಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿ ನಿರತ ಇಬ್ಬರು ಅಸ್ವಸ್ಥರಾದರು. ಬಿಸಿಲಿನ ಝಳದಿಂದ ಸುಸ್ತಾಗಿದ್ದವರನ್ನು ಮನೆಗೆ ಕಳುಹಿಸಿದರು.</p>.<p>ಪಿಎಸ್ಐ ಹಾರೂನ್ ಅಖ್ತರ್, ಶ್ರೀಪತಿ ಗಿನ್ನಿ, ಎಎಸ್ಐ ಶ್ರೀನಿವಾಸ್ ಸೇರಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>