<p><strong>ಮಲೇಬೆನ್ನೂರು</strong>: ಪಟ್ಟಣದ ಪೊಲೀಸ್ ಠಾಣೆ ಮೇಲೆ ಸೋಮವಾರ ಸಂಜೆ ಹೆಜ್ಜೇನು ಹುಳುಗಳು ಏಕಾಏಕಿ ದಾಳಿ ನಡೆಸಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.</p>.<p>ಹೆಜ್ಜೇನುಗಳ ಹಿಂಡು ಗುಂಯ್ ಗುಟ್ಟುತ್ತ ಬಂದಿದ್ದನ್ನು ಕಂಡು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಕೆಲವೇ ಸಮಯದಲ್ಲಿ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೀಪ ಆರಿಸಿ ಕಿಟಕಿ, ಬಾಗಿಲು ಹಾಕಿ ಹೊರಕ್ಕೆ ಬಂದಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಕೆಲಸ ಸ್ಥಗಿತಗೊಳಿಸಲಾಗಿತ್ತು.</p>.<p>ಕಟ್ಟಡದ ಒಳಗೆ ಜಮಾವಣೆಯಾಗಿದ್ದ ಹುಳುಗಳು ಊದಿನಕಡ್ಡಿ ಹಚ್ಚಿದ್ದರಿಂದ ಹಾರಿ ಹೋಗಿವೆ.</p>.<p>‘ಜೇನಿನ ಹುಳು ತಂಪಾಗಿರುವ ಸ್ಥಳಕ್ಕೆ ಬರಲು ಮುಖ್ಯ ಕಾರಣ ಬಿಸಿಲ ಝಳ, ಗಾಳಿ’ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟರು.</p>.<p>‘ಠಾಣೆಯಲ್ಲಿ ಉದ್ಯಾನ ಇರುವ ಕಾರಣ ತಂಪನ್ನರಸಿ ಬಂದಿವೆ. ಕಟ್ಟಡಕ್ಕೆ ಚಾವಣಿ ಅಳವಡಿಸಿದ ಕಾರಣ ಒಳಗೂ ತಂಪಾಗಿದೆ. ಹೀಗಾಗಿ ಬಂದಿವೆ. ಅವುಗಳಿಗೆ ಯಾರಾದರೂ ತೊಂದರೆ ನೀಡಿದರೆ ಮಾತ್ರ ದಾಳಿ ನಡೆಸುತ್ತವೆ. ಜೇನು ಹುಳು ಬರುವುದು ಶುಭ ಸಂಕೇತ’ ಎಂದರು.</p>.<p>‘ಸಂಜೆ ವೇಳೆ ಸಮಸ್ಯೆ ಹೇಳಿಕೊಂಡು ಠಾಣೆಗೆ ಸಾರ್ವಜನಿಕರು ಬರುವುದು ಹೆಚ್ಚು. ಈ ಸಮಯದಲ್ಲಿ ಜೇನು ಹುಳುಗಳು ಬಂದಿದ್ದರೂ ಯಾರಿಗೂ ತೊಂದರೆ ಮಾಡಿಲ್ಲ’ ಎಂದು ಪಿಎಸ್ಐ ಹಾರೂನ್ ಅಖ್ತರ್ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-43-33260600</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಪಟ್ಟಣದ ಪೊಲೀಸ್ ಠಾಣೆ ಮೇಲೆ ಸೋಮವಾರ ಸಂಜೆ ಹೆಜ್ಜೇನು ಹುಳುಗಳು ಏಕಾಏಕಿ ದಾಳಿ ನಡೆಸಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.</p>.<p>ಹೆಜ್ಜೇನುಗಳ ಹಿಂಡು ಗುಂಯ್ ಗುಟ್ಟುತ್ತ ಬಂದಿದ್ದನ್ನು ಕಂಡು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಕೆಲವೇ ಸಮಯದಲ್ಲಿ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೀಪ ಆರಿಸಿ ಕಿಟಕಿ, ಬಾಗಿಲು ಹಾಕಿ ಹೊರಕ್ಕೆ ಬಂದಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಕೆಲಸ ಸ್ಥಗಿತಗೊಳಿಸಲಾಗಿತ್ತು.</p>.<p>ಕಟ್ಟಡದ ಒಳಗೆ ಜಮಾವಣೆಯಾಗಿದ್ದ ಹುಳುಗಳು ಊದಿನಕಡ್ಡಿ ಹಚ್ಚಿದ್ದರಿಂದ ಹಾರಿ ಹೋಗಿವೆ.</p>.<p>‘ಜೇನಿನ ಹುಳು ತಂಪಾಗಿರುವ ಸ್ಥಳಕ್ಕೆ ಬರಲು ಮುಖ್ಯ ಕಾರಣ ಬಿಸಿಲ ಝಳ, ಗಾಳಿ’ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟರು.</p>.<p>‘ಠಾಣೆಯಲ್ಲಿ ಉದ್ಯಾನ ಇರುವ ಕಾರಣ ತಂಪನ್ನರಸಿ ಬಂದಿವೆ. ಕಟ್ಟಡಕ್ಕೆ ಚಾವಣಿ ಅಳವಡಿಸಿದ ಕಾರಣ ಒಳಗೂ ತಂಪಾಗಿದೆ. ಹೀಗಾಗಿ ಬಂದಿವೆ. ಅವುಗಳಿಗೆ ಯಾರಾದರೂ ತೊಂದರೆ ನೀಡಿದರೆ ಮಾತ್ರ ದಾಳಿ ನಡೆಸುತ್ತವೆ. ಜೇನು ಹುಳು ಬರುವುದು ಶುಭ ಸಂಕೇತ’ ಎಂದರು.</p>.<p>‘ಸಂಜೆ ವೇಳೆ ಸಮಸ್ಯೆ ಹೇಳಿಕೊಂಡು ಠಾಣೆಗೆ ಸಾರ್ವಜನಿಕರು ಬರುವುದು ಹೆಚ್ಚು. ಈ ಸಮಯದಲ್ಲಿ ಜೇನು ಹುಳುಗಳು ಬಂದಿದ್ದರೂ ಯಾರಿಗೂ ತೊಂದರೆ ಮಾಡಿಲ್ಲ’ ಎಂದು ಪಿಎಸ್ಐ ಹಾರೂನ್ ಅಖ್ತರ್ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-43-33260600</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>