<p><strong>ಮಲೇಬೆನ್ನೂರು</strong>: ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರಲ್ಲಿ ರಸ್ತೆ ವಿಭಜಕ ಇರದ ಕಾರಣ, ಬಸ್ ನಿಲ್ದಾಣದ ಮುಖ್ಯ ವೃತ್ತ ಹಾಗೂ ಪುರಸಭೆ ಕಚೇರಿಯ ಆಸುಪಾಸಿನ ಪ್ರದೇಶವು ಅಪಘಾತ ವಲಯವಾಗಿ ಮಾರ್ಪಟ್ಟಿದೆ.</p>.<p>ಎಂಟು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ ನಿಗಮ ರಸ್ತೆ ನಿರ್ಮಿಸಿದ್ದಾಗ ವಿಭಜಕವನ್ನು ಅಳವಡಿಸಲಾಗಿತ್ತು. ಆಗ ಈ ಎರಡೂ ಕಡೆಗಳಲ್ಲಿ ವಾಹನ ಸಂಚಾರ ವ್ಯವಸ್ಥಿತವಾಗಿತ್ತು. ಇದಾದ ಬಳಿಕ ಕೆಶಿಪ್ (ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಸಂಸ್ಥೆಯು ₹ 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದು, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ. 6 ಕಡೆ ವೈಜಾನಿಕ ರಸ್ತೆ ಉಬ್ಬು ಹಾಕಿ ಬಿಳಿ ಬಣ್ಣದ ಪಟ್ಟಿ ಹಾಕಲಾಗಿದೆ. ಆದರೆ, ರಸ್ತೆ ವಿಭಜಕಗಳನ್ನು ತೆಗೆದಿದ್ದರಿಂದ ಸಂಚಾರಕ್ಕೆ ತೊಡಕಾಗಿದೆ ಎಂದು ವಾಹನ ಸವಾರರು ದೂರುತ್ತಾರೆ.</p>.<p>‘ರಸ್ತೆ ವಿಭಜಕ ನಿರ್ಮಾಣ ಕಾಮಗಾರಿಯು ಅಂದಾಜು ಪಟ್ಟಿಯಲ್ಲಿ ಸೇರಿಲ್ಲ’ ಎಂದು ಗುತ್ತಿಗೆದಾರರು ಹೇಳುತ್ತಾರೆ. ‘ಕಾಮಗಾರಿ ನಿರ್ವಹಿಸಿರುವುದು ಕೆಶಿಪ್’ ಎಂದು ಹೇಳಿ ಎಂಜಿನಿಯರ್ಗಳು ಕೈ ತೊಳೆದುಕೊಳ್ಳುತ್ತಾರೆ.</p>.<p>ಜನದಟ್ಟಣೆ ಅಧಿಕ: ಪ್ರತೀ ಗುರುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ. ಈ ವೇಳೆ ವಾಹನ ಸಂಚಾರ ದ್ವಿಗುಣವಾಗಿರುತ್ತದೆ. ಭತ್ತದ ಕೊಯ್ಲು ಪ್ರಕ್ರಿಯೆ ಆರಂಭವಾಗಿದ್ದು, ಭತ್ತ ಸಾಗಿಸುವ ಟ್ರ್ಯಾಕ್ಟರ್ಗಳ ಭರಾಟೆ ಹೆಚ್ಚಾಗಿದೆ. ದ್ವಿಚಕ್ರ ವಾಹನ, ಆಟೊ, ಬಸ್ ಹಾಗೂ ಲಾರಿಗಳ ಸಂಚಾರವೂ ಹೆಚ್ಚಿದೆ. ರಾತ್ರಿ ಭಾರಿ ವಾಹನಗಳು ಪ್ರಖರ ಬೆಳಕು ಹೊಮ್ಮಿಸುತ್ತಾ ವೇಗವಾಗಿ ಸಾಗುತ್ತವೆ. ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ವಾಹನ ಸಂಚಾರ ಕಷ್ಟಕರವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.</p>.<p>ರಸ್ತೆ ಸುವ್ಯವಸ್ಥಿತವಾಗಿದ್ದರೂ ವಾಹನಗಳ ಭರಾಟೆಯಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂಚರಿಸುವುದು ದುಸ್ತರವಾಗಿದೆ. ಪ್ರತಿನಿತ್ಯ ದ್ವಿಚಕ್ರ ವಾಹನಗಳು ಒಂದಕ್ಕೊಂದು ಗುದ್ದಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಚಿಕ್ಕಪುಟ್ಟ ಘಟನೆ ನಡೆದಾಗ ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಾರೆ. ಆದರೆ, ರಸ್ತೆ ವಿಭಜಕ ಇಲ್ಲದ ಕಾರಣ ಸಮಸ್ಯೆ ಹಾಗೇ ಮುಂದುವರಿಯುತ್ತಿದೆ.</p>.<p>ಪಟ್ಟಣದಲ್ಲಿ ಈಚೆಗೆ ನಡೆದ ಉರುಸ್ ಸಂದರ್ಭದಲ್ಲಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆಯ ನಡುವೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದರು. ವಾರದ ಬಳಿಕ ಅದನ್ನು ತೆರವುಗೊಳಿಸಿದ್ದರು.</p>.<p>ಸಂಭಾವ್ಯ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ತುರ್ತಾಗಿ ಲೋಕೋಪಯೋಗಿ ಇಲಾಖೆ ಅಥವಾ ಕೆಶಿಪ್ ವತಿಯಿಂದ ರಸ್ತೆ ವಿಭಜಕ ಅಥವಾ ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಬೇಕು ಎಂದು ರಸ್ತೆಬದಿಯ ಅಂಗಡಿಗಳ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಒತ್ತಾಯಿಸುತ್ತಾರೆ.</p>.<p>ಪ್ರಾಣಿಗಳು ವಾಹನಗಳಿಗೆ ಅಡ್ಡ ಬಂದರೆ ಅಪಘಾತ ಖಚಿತ. ಪ್ರಮುಖ ಕಡೆಗಳಲ್ಲಿ ಸಂಚಾರ ಸುವ್ಯವಸ್ಥೆ ಗಮನಿಸಲು ಪೊಲೀಸರನ್ನು ನೇಮಿಸಬೇಕು. ಪಟ್ಟಣದ ಒಳಗೆ ವೇಗದ ಮಿತಿ 20 ಕಿ.ಮೀ. ನಿಗದಿಪಡಿಸಬೇಕು</p><p><strong>-ಶಿವಕ್ಳ ಆಂಜನೇಯ, ಹಿರೆಹಾಲಿವಾಣ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರಲ್ಲಿ ರಸ್ತೆ ವಿಭಜಕ ಇರದ ಕಾರಣ, ಬಸ್ ನಿಲ್ದಾಣದ ಮುಖ್ಯ ವೃತ್ತ ಹಾಗೂ ಪುರಸಭೆ ಕಚೇರಿಯ ಆಸುಪಾಸಿನ ಪ್ರದೇಶವು ಅಪಘಾತ ವಲಯವಾಗಿ ಮಾರ್ಪಟ್ಟಿದೆ.</p>.<p>ಎಂಟು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ ನಿಗಮ ರಸ್ತೆ ನಿರ್ಮಿಸಿದ್ದಾಗ ವಿಭಜಕವನ್ನು ಅಳವಡಿಸಲಾಗಿತ್ತು. ಆಗ ಈ ಎರಡೂ ಕಡೆಗಳಲ್ಲಿ ವಾಹನ ಸಂಚಾರ ವ್ಯವಸ್ಥಿತವಾಗಿತ್ತು. ಇದಾದ ಬಳಿಕ ಕೆಶಿಪ್ (ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಸಂಸ್ಥೆಯು ₹ 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದು, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ. 6 ಕಡೆ ವೈಜಾನಿಕ ರಸ್ತೆ ಉಬ್ಬು ಹಾಕಿ ಬಿಳಿ ಬಣ್ಣದ ಪಟ್ಟಿ ಹಾಕಲಾಗಿದೆ. ಆದರೆ, ರಸ್ತೆ ವಿಭಜಕಗಳನ್ನು ತೆಗೆದಿದ್ದರಿಂದ ಸಂಚಾರಕ್ಕೆ ತೊಡಕಾಗಿದೆ ಎಂದು ವಾಹನ ಸವಾರರು ದೂರುತ್ತಾರೆ.</p>.<p>‘ರಸ್ತೆ ವಿಭಜಕ ನಿರ್ಮಾಣ ಕಾಮಗಾರಿಯು ಅಂದಾಜು ಪಟ್ಟಿಯಲ್ಲಿ ಸೇರಿಲ್ಲ’ ಎಂದು ಗುತ್ತಿಗೆದಾರರು ಹೇಳುತ್ತಾರೆ. ‘ಕಾಮಗಾರಿ ನಿರ್ವಹಿಸಿರುವುದು ಕೆಶಿಪ್’ ಎಂದು ಹೇಳಿ ಎಂಜಿನಿಯರ್ಗಳು ಕೈ ತೊಳೆದುಕೊಳ್ಳುತ್ತಾರೆ.</p>.<p>ಜನದಟ್ಟಣೆ ಅಧಿಕ: ಪ್ರತೀ ಗುರುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ. ಈ ವೇಳೆ ವಾಹನ ಸಂಚಾರ ದ್ವಿಗುಣವಾಗಿರುತ್ತದೆ. ಭತ್ತದ ಕೊಯ್ಲು ಪ್ರಕ್ರಿಯೆ ಆರಂಭವಾಗಿದ್ದು, ಭತ್ತ ಸಾಗಿಸುವ ಟ್ರ್ಯಾಕ್ಟರ್ಗಳ ಭರಾಟೆ ಹೆಚ್ಚಾಗಿದೆ. ದ್ವಿಚಕ್ರ ವಾಹನ, ಆಟೊ, ಬಸ್ ಹಾಗೂ ಲಾರಿಗಳ ಸಂಚಾರವೂ ಹೆಚ್ಚಿದೆ. ರಾತ್ರಿ ಭಾರಿ ವಾಹನಗಳು ಪ್ರಖರ ಬೆಳಕು ಹೊಮ್ಮಿಸುತ್ತಾ ವೇಗವಾಗಿ ಸಾಗುತ್ತವೆ. ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ವಾಹನ ಸಂಚಾರ ಕಷ್ಟಕರವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.</p>.<p>ರಸ್ತೆ ಸುವ್ಯವಸ್ಥಿತವಾಗಿದ್ದರೂ ವಾಹನಗಳ ಭರಾಟೆಯಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂಚರಿಸುವುದು ದುಸ್ತರವಾಗಿದೆ. ಪ್ರತಿನಿತ್ಯ ದ್ವಿಚಕ್ರ ವಾಹನಗಳು ಒಂದಕ್ಕೊಂದು ಗುದ್ದಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಚಿಕ್ಕಪುಟ್ಟ ಘಟನೆ ನಡೆದಾಗ ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಾರೆ. ಆದರೆ, ರಸ್ತೆ ವಿಭಜಕ ಇಲ್ಲದ ಕಾರಣ ಸಮಸ್ಯೆ ಹಾಗೇ ಮುಂದುವರಿಯುತ್ತಿದೆ.</p>.<p>ಪಟ್ಟಣದಲ್ಲಿ ಈಚೆಗೆ ನಡೆದ ಉರುಸ್ ಸಂದರ್ಭದಲ್ಲಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆಯ ನಡುವೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದರು. ವಾರದ ಬಳಿಕ ಅದನ್ನು ತೆರವುಗೊಳಿಸಿದ್ದರು.</p>.<p>ಸಂಭಾವ್ಯ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ತುರ್ತಾಗಿ ಲೋಕೋಪಯೋಗಿ ಇಲಾಖೆ ಅಥವಾ ಕೆಶಿಪ್ ವತಿಯಿಂದ ರಸ್ತೆ ವಿಭಜಕ ಅಥವಾ ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಬೇಕು ಎಂದು ರಸ್ತೆಬದಿಯ ಅಂಗಡಿಗಳ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಒತ್ತಾಯಿಸುತ್ತಾರೆ.</p>.<p>ಪ್ರಾಣಿಗಳು ವಾಹನಗಳಿಗೆ ಅಡ್ಡ ಬಂದರೆ ಅಪಘಾತ ಖಚಿತ. ಪ್ರಮುಖ ಕಡೆಗಳಲ್ಲಿ ಸಂಚಾರ ಸುವ್ಯವಸ್ಥೆ ಗಮನಿಸಲು ಪೊಲೀಸರನ್ನು ನೇಮಿಸಬೇಕು. ಪಟ್ಟಣದ ಒಳಗೆ ವೇಗದ ಮಿತಿ 20 ಕಿ.ಮೀ. ನಿಗದಿಪಡಿಸಬೇಕು</p><p><strong>-ಶಿವಕ್ಳ ಆಂಜನೇಯ, ಹಿರೆಹಾಲಿವಾಣ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>