ಆ ಸರ್ಕಾರಿ ವಕೀಲರ ಶುಲ್ಕವನ್ನು ಭರಿಸಬೇಕು. ಎರಡು ಪ್ರಕರಣ ದಾಖಲಾಗಿರುವುದರಿಂದ ಒಂದು ಪ್ರಕರಣಕ್ಕೆ ₹ 5,500ರಂತೆ ಒಟ್ಟು ₹ 11,000 ನೀಡಬೇಕು ಎಂದು ಮಹೇಶ್ವರಪ್ಪ ಅವರಿಗೆ ಪಿಡಿಒ ನಿಂಗಾಚಾರಿ ತಿಳಿಸಿದ್ದರು. ಕಡಿಮೆ ಮಾಡಲು ಮಹೇಶ್ವರಪ್ಪ ಕೇಳಿಕೊಂಡಾಗ ತಲಾ ₹ 500 ಕಡಿಮೆ ಮಾಡಿಸುವುದಾಗಿ ಪಿಡಿಒ ಹೇಳಿದ್ದರು. ಬಳಿಕ ಮಹೇಶ್ವರಪ್ಪ ಈ ಬಗ್ಗೆ ಸರ್ಕಾರಿ ವಕೀಲರನ್ನು ಸಂಪರ್ಕಿಸಿದಾಗ ಸರ್ಕಾರ ವೇತನ ನೀಡುತ್ತದೆ. ಬೇರೆಯವರಿಂದ ಪಡೆಯುವುದಿಲ್ಲ ಎಂದು ತಿಳಿಸಿದ್ದರು.