ಬಿಳಿಚೋಡು, ಜಗಳೂರು, ದಾವಣಗೆರೆ ಗ್ರಾಮಾಂತರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಬಸವಾನಗರ, ಬಡಾವಣೆ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ ಏರಿವೆ. ಅಲ್ಲದೇ ಇನ್ನು ಮುಂದೆ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ ಎಂಬ ವೃತ್ತಗಳು ಇರುವುದಿಲ್ಲ. ಆಜಾದ್ನಗರ, ಗಾಂಧಿನಗರ, ಆರ್ಎಂಸಿ ಈ ಮೂರು ಠಾಣೆಗಳನ್ನು ಸೇರಿಸಿ ಆಜಾದ್ನಗರ ವೃತ್ತ ಎಂದು ಮಾಡಲಾಗಿದೆ. ಕೆಟಿಜೆ ನಗರ ಮತ್ತು ವಿದ್ಯಾನಗರ ಎರಡು ಠಾಣೆಗಳನ್ನು ಸೇರಿಸಿ ಕೆಟಿಜೆ ನಗರ ವೃತ್ತ ಎಂದು ಪರಿವರ್ತನೆ ಮಾಡಲಾಗಿದೆ.